ಬ್ಯಾಂಕಾಕ್: ನೋವಿನ ನಡುವೆಯೂ ದಿಟ್ಟ ಆಟವಾಡಿದ ಭಾರತದ ಎಚ್.ಎಸ್.ಪ್ರಣಯ್, ಟೊಯೊಟಾ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು. ಅವರು ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ 18–21, 21–16, 23–11ರಿಂದ ಏಷ್ಯನ್ ಗೇಮ್ಸ್ ಚಾಂಪಿಯನ್, ಇಂಡೊನೇಷ್ಯಾದ ಜೋನಾಥನ್ ಕ್ರಿಸ್ಟಿ ಅವರಿಗೆ ಆಘಾತ ನೀಡಿದರು.