ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಅಭಿನವ್ ಕೆ. ಮೂರ್ತಿ ಹಾಗೂ ಪರ್ಣವಿ ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಕ್ರಮವಾಗಿ ಸಬ್ಜೂನಿಯರ್ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಮಲ್ಲೇಶ್ವರಂ ಸಂಸ್ಥೆಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬಾಲಕರ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಭಿನವ್ 11-7,13-11, 11-2ರಿಂದ ಆಯುಷ್ ಕೆ. ಅವರನ್ನು ಮಣಿಸಿದರು.
ಸೆಮಿಫೈನಲ್ನಲ್ಲಿ ಅಭಿನವ್ 15–13, 11–13, 14–12, 13–11ರಿಂದ ವರುಣ್ ಬಿ. ಕಶ್ಯಪ್ ಅವರನ್ನು ಸೋಲಿಸಿದ್ದರು.
ಬಾಲಕಿಯರ ವಿಭಾಗದ ಫೈನಲ್ನಲ್ಲಿ ಆರಂಭದ ಹಿನ್ನಡೆಯಿಂದ ಚೇತರಿಸಿಕೊಂಡ ಪರ್ಣವಿ 6–11, 7–11, 12–10, 11–6, 11–7ರಿಂದ ಸಾನ್ವಿ ವಿಶಾಲ್ ಮಾಂಡೇಕರ್ ಎದುರು ಜಯಿಸಿದರು.
ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಪರ್ಣವಿ ಅವರಿಗೆ ಶ್ರೀಯಾ ಕಿರಣ್ ಎದುರು 8–11, 11–7, 8–11, 11–6, 11–5ರಿಂದ ಜಯ ಒಲಿದಿತ್ತು.