<p><strong>ಬೆಂಗಳೂರು</strong>: ಕರ್ನಾಟಕದ ಎ.ದೀಪಕ್ ಮತ್ತು ಮಣಿಪುರದ ಜೆನ್ನಿಫರ್ ಲುಯಿಖಮ್ ಅವರು ಎಐಟಿಎ ಟಿಎನ್ಆರ್ ಸ್ಮರಣಾರ್ಥ ಆಲ್ ಇಂಡಿಯಾ ರ್ಯಾಂಕಿಂಗ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡರು.</p><p>ಇಲ್ಲಿನ ಟಾಪ್ಸ್ಪಿನ್ ಟೆನಿಸ್ ಅಕಾಡೆಮಿ ಕೋರ್ಟ್ನಲ್ಲಿ ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ದೀಪಕ್ 6-4, 3-2ರಿಂದ ಆರನೇ ಶ್ರೇಯಾಂಕದ ರಿಷಿ ರೆಡ್ಡಿ ಅವರನ್ನು ಮಣಿಸಿದರು.</p><p>ಎರಡನೇ ಸೆಟ್ ಆಟದ ವೇಳೆ ಕರ್ನಾಟಕದ ಮತ್ತೊಬ್ಬ ರಿಷಿ ಗಾಯಾಳಾಗಿ ಪಂದ್ಯದಿಂದ ಹಿಂದೆ ಸರಿದರು. ದೀಪಕ್ ಪ್ರಶಸ್ತಿಯ ಜೊತೆ ₹12.5 ಸಾವಿರ ಬಹುಮಾನ ಮತ್ತು 20 ಎಐಟಿಎ ಪಾಯಿಂಟ್ಸ್ ತಮ್ಮದಾಗಿಸಿಕೊಂಡರು. ರಿಷಿ ₹8.5 ಸಾವಿರ ಮತ್ತು 15 ಎಐಟಿಎ ಅಂಕ ಗಳಿಸಿದರು. ಮಹಿಳೆಯರ ವಿಭಾಗದ ಫೈನಲ್ನಲ್ಲಿ ಜೆನ್ನಿಫರ್ 1-6, 6-2, 6-4 ಕರ್ನಾಟಕದ ಹರ್ಷಿಣಿ ರೆಡ್ಡಿ ಅವರನ್ನು ಸೋಲಿಸಿದರು. ಅವರು ಪ್ರಶಸ್ತಿಯೊಂದಿಗೆ ₹12.5 ಸಾವಿರ ಬಹುಮಾನ ಮತ್ತು 20 ಎಐಟಿಎ ಪಾಯಿಂಟ್ಸ್ ಪಡೆದರು. ಟೂರ್ನಿಯು ಒಟ್ಟು ₹2 ಲಕ್ಷ ಬಹುಮಾನ ಮೊತ್ತ ಒಳಗೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕದ ಎ.ದೀಪಕ್ ಮತ್ತು ಮಣಿಪುರದ ಜೆನ್ನಿಫರ್ ಲುಯಿಖಮ್ ಅವರು ಎಐಟಿಎ ಟಿಎನ್ಆರ್ ಸ್ಮರಣಾರ್ಥ ಆಲ್ ಇಂಡಿಯಾ ರ್ಯಾಂಕಿಂಗ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡರು.</p><p>ಇಲ್ಲಿನ ಟಾಪ್ಸ್ಪಿನ್ ಟೆನಿಸ್ ಅಕಾಡೆಮಿ ಕೋರ್ಟ್ನಲ್ಲಿ ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ದೀಪಕ್ 6-4, 3-2ರಿಂದ ಆರನೇ ಶ್ರೇಯಾಂಕದ ರಿಷಿ ರೆಡ್ಡಿ ಅವರನ್ನು ಮಣಿಸಿದರು.</p><p>ಎರಡನೇ ಸೆಟ್ ಆಟದ ವೇಳೆ ಕರ್ನಾಟಕದ ಮತ್ತೊಬ್ಬ ರಿಷಿ ಗಾಯಾಳಾಗಿ ಪಂದ್ಯದಿಂದ ಹಿಂದೆ ಸರಿದರು. ದೀಪಕ್ ಪ್ರಶಸ್ತಿಯ ಜೊತೆ ₹12.5 ಸಾವಿರ ಬಹುಮಾನ ಮತ್ತು 20 ಎಐಟಿಎ ಪಾಯಿಂಟ್ಸ್ ತಮ್ಮದಾಗಿಸಿಕೊಂಡರು. ರಿಷಿ ₹8.5 ಸಾವಿರ ಮತ್ತು 15 ಎಐಟಿಎ ಅಂಕ ಗಳಿಸಿದರು. ಮಹಿಳೆಯರ ವಿಭಾಗದ ಫೈನಲ್ನಲ್ಲಿ ಜೆನ್ನಿಫರ್ 1-6, 6-2, 6-4 ಕರ್ನಾಟಕದ ಹರ್ಷಿಣಿ ರೆಡ್ಡಿ ಅವರನ್ನು ಸೋಲಿಸಿದರು. ಅವರು ಪ್ರಶಸ್ತಿಯೊಂದಿಗೆ ₹12.5 ಸಾವಿರ ಬಹುಮಾನ ಮತ್ತು 20 ಎಐಟಿಎ ಪಾಯಿಂಟ್ಸ್ ಪಡೆದರು. ಟೂರ್ನಿಯು ಒಟ್ಟು ₹2 ಲಕ್ಷ ಬಹುಮಾನ ಮೊತ್ತ ಒಳಗೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>