<figcaption>""</figcaption>.<p><strong>ಬೆಂಗಳೂರು:</strong> ಸದಾ ಒಂದಿಲ್ಲೊಂದು ಕ್ರೀಡಾ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುವ ಉದ್ಯಾನ ನಗರಿಯಲ್ಲಿ ಈಗ ಟೆನಿಸ್ ಸಂಭ್ರಮ ಗರಿಗೆದರಿದೆ.</p>.<p>ಏಷ್ಯಾದ ಅತಿ ದೊಡ್ಡ ಟೆನಿಸ್ ಟೂರ್ನಿ ಎನಿಸಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ನ ಮೂರನೇ ಆವೃತ್ತಿಗೆ ಸೋಮವಾರ ಚಾಲನೆ ದೊರೆಯಲಿದೆ.</p>.<p>ಕಬ್ಬನ್ ಉದ್ಯಾನದಲ್ಲಿರುವ ಕರ್ನಾ ಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಅಂಗಳದಲ್ಲಿ ಒಟ್ಟು ಏಳು ದಿನಗಳ ಕಾಲ ನಡೆಯುವ ಟೆನಿಸ್ ‘ಹಬ್ಬ’ದಲ್ಲಿ ಬಲಿಷ್ಠ ಆಟಗಾರರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ.</p>.<p>ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ 100ರೊಳಗೆ ಸ್ಥಾನ ಗಳಿಸಿರುವ ಸ್ಟೆಫಾನೊ ಟ್ರವಾಗ್ಲಿಯಾ, ಯುಯಿಚಿ ಸುಗಿಟಾ, ಜೇಮ್ಸ್ ಡಕ್ವರ್ಥ್ ಅವರ ಆಟ ಕಣ್ತುಂಬಿಕೊಳ್ಳುವ ಅವಕಾಶವೂ ‘ಸಿಲಿಕಾನ್ ಸಿಟಿ’ಯ ಟೆನಿಸ್ ಪ್ರಿಯರಿಗೆ ಸಿಗಲಿದೆ.</p>.<p>ಭಾರತದ ಪ್ರಜ್ಞೇಶ್ ಗುಣೇಶ್ವರನ್, ಟೂರ್ನಿಯ ಹಾಲಿ ಚಾಂಪಿಯನ್ ಆಗಿದ್ದಾರೆ. ವಿಶ್ವ ರ್ಯಾಂಕಿಂಗ್ನಲ್ಲಿ 122ನೇ ಸ್ಥಾನದಲ್ಲಿರುವ ಅವರು ಈ ಬಾರಿ ಟ್ರೋಫಿ ಉಳಿಸಿಕೊಳ್ಳುವರೇ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮನೆಮಾಡಿದೆ.</p>.<p>ಚೆನ್ನೈನ ಎಡಗೈ ಆಟಗಾರ ಪ್ರಜ್ಞೇಶ್, ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ‘ಬೈ’ ಲಭಿಸಿದೆ.</p>.<p>ಹೋದ ವಾರ ನಡೆದಿದ್ದ ಮಹಾರಾಷ್ಟ್ರ ಚಾಲೆಂಜರ್ ಟೂರ್ನಿಯಲ್ಲಿ ಪ್ರಜ್ಞೇಶ್, ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಎಡವಿದ್ದರು. ಅವರಿಗೆ ಸ್ಟೆಫಾನೊ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.</p>.<p>ಸುಮಿತ್ ನಗಾಲ್ ಅವರೂ ಸಿಂಗಲ್ಸ್ನಲ್ಲಿ ಭಾರತದ ಭರವಸೆಯಾಗಿದ್ದಾರೆ. 2017ರ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಸುಮಿತ್, ಈ ಬಾರಿ ಎಂಟನೇ ಶ್ರೇಯಾಂಕ ಪಡೆ ದಿದ್ದಾರೆ. ಅವರಿಗೂ ಮೊದಲ ಸುತ್ತಿನಲ್ಲಿ ‘ಬೈ’ ಸಿಕ್ಕಿದೆ. ಈ ಬಾರಿಯೂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅವರು ಎರಡು ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದು ಕಠಿಣ ಅಭ್ಯಾಸ ನಡೆಸಿದ್ದಾರೆ.</p>.<p><strong>ಕರ್ನಾಟಕದ ಮೂವರಿಗೆ ‘ವೈಲ್ಡ್ ಕಾರ್ಡ್’:</strong> ರಾಜ್ಯದ ಯುವ ಆಟಗಾರರಾದ ಆದಿಲ್ ಕಲ್ಯಾಣಪುರ್, ಎಸ್.ಡಿ.ಪ್ರಜ್ವಲ್ ದೇವ್ ಮತ್ತು ಸೂರಜ್ ಪ್ರಭೋದ್ ಅವರಿಗೆ ‘ವೈಲ್ಡ್ ಕಾರ್ಡ್’ ಅರ್ಹತೆ ಲಭಿಸಿದೆ.</p>.<p>ಮೈಸೂರಿನ ಪ್ರಜ್ವಲ್ ಮತ್ತು ಆದಿಲ್ ಅವರು ಡಬಲ್ಸ್ನಲ್ಲಿ ಕಣಕ್ಕಿಳಿಯಲಿದ್ದು, ಅಮೋಘ ಆಟದ ಮೂಲಕ ತವರಿನ ಅಭಿಮಾನಿಗಳ ಮನಗೆಲ್ಲಲು ಕಾತರರಾಗಿದ್ದಾರೆ. ಬೆಂಗಳೂರಿನ 25 ವರ್ಷ ವಯಸ್ಸಿನ ಆಟಗಾರ ಸೂರಜ್ ಅವರು ಸಿಂಗಲ್ಸ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.</p>.<p><strong>ಲಿಯಾಂಡರ್ ಪೇಸ್ ಆಕರ್ಷಣೆ</strong></p>.<p>ಭಾರತದ ದಿಗ್ಗಜ ಆಟಗಾರ ಲಿಯಾಂಡರ್ ಪೇಸ್, ಟೂರ್ನಿಯ ಆಕರ್ಷಣೆಯಾಗಿದ್ದಾರೆ.</p>.<p>ಡಬಲ್ಸ್ನಲ್ಲಿ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಆಡಲಿದ್ದಾರೆ. ಸುಮಾರು ಮೂರು ದಶಕಗಳ ಟೆನಿಸ್ ಬದುಕಿನಲ್ಲಿ ಪೇಸ್ ಹಲವು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.</p>.<p>46 ವರ್ಷ ವಯಸ್ಸಿನ ಈ ಆಟಗಾರ, ಭಾರತದಲ್ಲಿ ಆಡುತ್ತಿರುವ ಕೊನೆಯ ಟೂರ್ನಿ ಇದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಬೆಂಗಳೂರು:</strong> ಸದಾ ಒಂದಿಲ್ಲೊಂದು ಕ್ರೀಡಾ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುವ ಉದ್ಯಾನ ನಗರಿಯಲ್ಲಿ ಈಗ ಟೆನಿಸ್ ಸಂಭ್ರಮ ಗರಿಗೆದರಿದೆ.</p>.<p>ಏಷ್ಯಾದ ಅತಿ ದೊಡ್ಡ ಟೆನಿಸ್ ಟೂರ್ನಿ ಎನಿಸಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ನ ಮೂರನೇ ಆವೃತ್ತಿಗೆ ಸೋಮವಾರ ಚಾಲನೆ ದೊರೆಯಲಿದೆ.</p>.<p>ಕಬ್ಬನ್ ಉದ್ಯಾನದಲ್ಲಿರುವ ಕರ್ನಾ ಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಅಂಗಳದಲ್ಲಿ ಒಟ್ಟು ಏಳು ದಿನಗಳ ಕಾಲ ನಡೆಯುವ ಟೆನಿಸ್ ‘ಹಬ್ಬ’ದಲ್ಲಿ ಬಲಿಷ್ಠ ಆಟಗಾರರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ.</p>.<p>ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ 100ರೊಳಗೆ ಸ್ಥಾನ ಗಳಿಸಿರುವ ಸ್ಟೆಫಾನೊ ಟ್ರವಾಗ್ಲಿಯಾ, ಯುಯಿಚಿ ಸುಗಿಟಾ, ಜೇಮ್ಸ್ ಡಕ್ವರ್ಥ್ ಅವರ ಆಟ ಕಣ್ತುಂಬಿಕೊಳ್ಳುವ ಅವಕಾಶವೂ ‘ಸಿಲಿಕಾನ್ ಸಿಟಿ’ಯ ಟೆನಿಸ್ ಪ್ರಿಯರಿಗೆ ಸಿಗಲಿದೆ.</p>.<p>ಭಾರತದ ಪ್ರಜ್ಞೇಶ್ ಗುಣೇಶ್ವರನ್, ಟೂರ್ನಿಯ ಹಾಲಿ ಚಾಂಪಿಯನ್ ಆಗಿದ್ದಾರೆ. ವಿಶ್ವ ರ್ಯಾಂಕಿಂಗ್ನಲ್ಲಿ 122ನೇ ಸ್ಥಾನದಲ್ಲಿರುವ ಅವರು ಈ ಬಾರಿ ಟ್ರೋಫಿ ಉಳಿಸಿಕೊಳ್ಳುವರೇ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮನೆಮಾಡಿದೆ.</p>.<p>ಚೆನ್ನೈನ ಎಡಗೈ ಆಟಗಾರ ಪ್ರಜ್ಞೇಶ್, ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ‘ಬೈ’ ಲಭಿಸಿದೆ.</p>.<p>ಹೋದ ವಾರ ನಡೆದಿದ್ದ ಮಹಾರಾಷ್ಟ್ರ ಚಾಲೆಂಜರ್ ಟೂರ್ನಿಯಲ್ಲಿ ಪ್ರಜ್ಞೇಶ್, ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಎಡವಿದ್ದರು. ಅವರಿಗೆ ಸ್ಟೆಫಾನೊ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.</p>.<p>ಸುಮಿತ್ ನಗಾಲ್ ಅವರೂ ಸಿಂಗಲ್ಸ್ನಲ್ಲಿ ಭಾರತದ ಭರವಸೆಯಾಗಿದ್ದಾರೆ. 2017ರ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಸುಮಿತ್, ಈ ಬಾರಿ ಎಂಟನೇ ಶ್ರೇಯಾಂಕ ಪಡೆ ದಿದ್ದಾರೆ. ಅವರಿಗೂ ಮೊದಲ ಸುತ್ತಿನಲ್ಲಿ ‘ಬೈ’ ಸಿಕ್ಕಿದೆ. ಈ ಬಾರಿಯೂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅವರು ಎರಡು ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದು ಕಠಿಣ ಅಭ್ಯಾಸ ನಡೆಸಿದ್ದಾರೆ.</p>.<p><strong>ಕರ್ನಾಟಕದ ಮೂವರಿಗೆ ‘ವೈಲ್ಡ್ ಕಾರ್ಡ್’:</strong> ರಾಜ್ಯದ ಯುವ ಆಟಗಾರರಾದ ಆದಿಲ್ ಕಲ್ಯಾಣಪುರ್, ಎಸ್.ಡಿ.ಪ್ರಜ್ವಲ್ ದೇವ್ ಮತ್ತು ಸೂರಜ್ ಪ್ರಭೋದ್ ಅವರಿಗೆ ‘ವೈಲ್ಡ್ ಕಾರ್ಡ್’ ಅರ್ಹತೆ ಲಭಿಸಿದೆ.</p>.<p>ಮೈಸೂರಿನ ಪ್ರಜ್ವಲ್ ಮತ್ತು ಆದಿಲ್ ಅವರು ಡಬಲ್ಸ್ನಲ್ಲಿ ಕಣಕ್ಕಿಳಿಯಲಿದ್ದು, ಅಮೋಘ ಆಟದ ಮೂಲಕ ತವರಿನ ಅಭಿಮಾನಿಗಳ ಮನಗೆಲ್ಲಲು ಕಾತರರಾಗಿದ್ದಾರೆ. ಬೆಂಗಳೂರಿನ 25 ವರ್ಷ ವಯಸ್ಸಿನ ಆಟಗಾರ ಸೂರಜ್ ಅವರು ಸಿಂಗಲ್ಸ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.</p>.<p><strong>ಲಿಯಾಂಡರ್ ಪೇಸ್ ಆಕರ್ಷಣೆ</strong></p>.<p>ಭಾರತದ ದಿಗ್ಗಜ ಆಟಗಾರ ಲಿಯಾಂಡರ್ ಪೇಸ್, ಟೂರ್ನಿಯ ಆಕರ್ಷಣೆಯಾಗಿದ್ದಾರೆ.</p>.<p>ಡಬಲ್ಸ್ನಲ್ಲಿ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಆಡಲಿದ್ದಾರೆ. ಸುಮಾರು ಮೂರು ದಶಕಗಳ ಟೆನಿಸ್ ಬದುಕಿನಲ್ಲಿ ಪೇಸ್ ಹಲವು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.</p>.<p>46 ವರ್ಷ ವಯಸ್ಸಿನ ಈ ಆಟಗಾರ, ಭಾರತದಲ್ಲಿ ಆಡುತ್ತಿರುವ ಕೊನೆಯ ಟೂರ್ನಿ ಇದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>