ಎರಡನೇ ಶ್ರೇಯಾಂಕದ ವೀರಸಾಮಿ ಶೇಖರ್ ಕರ್ನಾಟಕದವರೇ ಆದ ಅನಿಲ್ ಅಲ್ಮೇಡಾ ಅವರನ್ನು 9–1ರಲ್ಲಿ ಮಣಿಸಿದರು. ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಹಂತದ ಇತರ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕಿತ, ತಮಿಳುನಾಡಿನ ದುರೈ ಮರಿಯಪ್ಪ ಉತ್ತರಪ್ರದೇಶದ ಇಂದ್ರಜೀತ್ ಪಾಂಡೆ ವಿರುದ್ಧ 9–5ರಲ್ಲಿ, ನಾಲ್ಕನೇ ಶ್ರೇಯಾಂಕಿತ ತಮಿಳುನಾಡಿನ ಸುಬ್ರಮಣಿಯನ್ ಬಾಲಚಂದ್ರ ಕರ್ನಾಟಕದ ಎಚ್.ಮಧುಸೂದನ್ ವಿರುದ್ಧ 9–3ರಲ್ಲಿ, ಮೂರನೇ ಶ್ರೇಯಾಂಕಿತ ತಮಿಳುನಾಡಿನ ಕರುಣಾಕರನ್ ಕಾರ್ತಿಕ್ ಕರ್ನಾಟಕದ ಶಿವಪ್ರಸಾದ್ ವಿರುದ್ಧ 9–3ರಲ್ಲಿ ಗೆಲುವು ಸಾಧಿಸಿದರು.