<p><strong>ಬೆಂಗಳೂರು: </strong>ಕರ್ನಾಟಕದ ಬಿ.ಆರ್. ನಿಕ್ಷೇಪ್ ಮತ್ತು ಆದಿಲ್ ಕಲ್ಯಾಣ್ಪುರ್ ಇಲ್ಲಿ ನಡೆಯುತ್ತಿರುವ ಆರ್.ಟಿ. ನಾರಾಯಣ್ ಸ್ಮಾರಕ ಎಐಟಿಎ ರಾಷ್ಟ್ರೀಯ ಜೂನಿಯರ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.<br /> <br /> ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ಮಂಗಳವಾರ ನಡೆದ ಬಾಲಕರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಅಗ್ರಶ್ರೇಯಾಂಕದ ನಿಕ್ಷೇಪ್ 6-2, 6-3 ರಲ್ಲಿ ಬಿ. ಅನಿರುದ್ಧ್ ಅವರನ್ನು ಮಣಿಸಿದರು.<br /> <br /> ಟೂರ್ನಿಗೆ ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದ ಆದಿಲ್ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಅವರು 6-2, 6-1 ರಲ್ಲಿ ಏಳನೇ ಶ್ರೇಯಾಂಕದ ಆಟಗಾರ ಮಯೂಕ್ ರಾವತ್ ವಿರುದ್ಧ ಜಯ ಪಡೆದರು.<br /> <br /> ಎರಡನೇ ಶ್ರೇಯಾಂಕದ ಆಟಗಾರ ಪಶ್ಚಿಮ ಬಂಗಾಳದ ಸನಿಲ್ ಜಗಿತಿಯಾನಿ 6-3, 6-1 ರಲ್ಲಿ ರಾಹುಲ್ ಶಂಕರ್ ಎದುರೂ, ಮೂರನೇ ಶ್ರೇಯಾಂಕದ ಆಟಗಾರ ಅಸ್ಸಾಂನ ಪರೀಕ್ಷಿತ್ ಸೊಮಾನಿ 6-4, 6-2 ರಲ್ಲಿ ಆದಿತ್ಯ ಮುತ್ತು ಸೆಲ್ವನ್ ಮೇಲೂ ಜಯ ಗಳಿಸಿದರು.<br /> <br /> ಎಂಎಸ್ಎಸ್ ಕೋರ್ಟ್ನಲ್ಲಿ ನಡೆದ ಬಾಲಕಿಯರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಮಹಾರಾಷ್ಟ್ರದ ಸ್ನೇಹಲ್ ಮಾನೆ 6-3, 6-3 ರಲ್ಲಿ ಕರ್ನಾಟಕದ ಶಿವಾನಿ ಮಂಜಣ್ಣ ಅವರನ್ನು ಮಣಿಸಿ 16ರ ಹಂತ ಪ್ರವೇಶಿಸಿದರು.<br /> <br /> ಇದೇ ವಿಭಾಗದ ಇತರ ಪಂದ್ಯಗಳಲ್ಲಿ ರಷ್ಮಿಕಾ ರಾಜನ್ 6-2, 6-2 ರಲ್ಲಿ ನಿಕಿತಾ ಪಿಂಟೊ ಎದುರೂ, ಲತಿಕಾ ಪ್ರೇಮ್ಕುಮಾರ್ 6-2, 6-7, 6-2 ರಲ್ಲಿ ಮುಸ್ಕಾನ್ ರಂಜನ್ ಮೇಲೂ ಜಯ ಸಾಧಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕರ್ನಾಟಕದ ಬಿ.ಆರ್. ನಿಕ್ಷೇಪ್ ಮತ್ತು ಆದಿಲ್ ಕಲ್ಯಾಣ್ಪುರ್ ಇಲ್ಲಿ ನಡೆಯುತ್ತಿರುವ ಆರ್.ಟಿ. ನಾರಾಯಣ್ ಸ್ಮಾರಕ ಎಐಟಿಎ ರಾಷ್ಟ್ರೀಯ ಜೂನಿಯರ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.<br /> <br /> ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ಮಂಗಳವಾರ ನಡೆದ ಬಾಲಕರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಅಗ್ರಶ್ರೇಯಾಂಕದ ನಿಕ್ಷೇಪ್ 6-2, 6-3 ರಲ್ಲಿ ಬಿ. ಅನಿರುದ್ಧ್ ಅವರನ್ನು ಮಣಿಸಿದರು.<br /> <br /> ಟೂರ್ನಿಗೆ ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದ ಆದಿಲ್ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಅವರು 6-2, 6-1 ರಲ್ಲಿ ಏಳನೇ ಶ್ರೇಯಾಂಕದ ಆಟಗಾರ ಮಯೂಕ್ ರಾವತ್ ವಿರುದ್ಧ ಜಯ ಪಡೆದರು.<br /> <br /> ಎರಡನೇ ಶ್ರೇಯಾಂಕದ ಆಟಗಾರ ಪಶ್ಚಿಮ ಬಂಗಾಳದ ಸನಿಲ್ ಜಗಿತಿಯಾನಿ 6-3, 6-1 ರಲ್ಲಿ ರಾಹುಲ್ ಶಂಕರ್ ಎದುರೂ, ಮೂರನೇ ಶ್ರೇಯಾಂಕದ ಆಟಗಾರ ಅಸ್ಸಾಂನ ಪರೀಕ್ಷಿತ್ ಸೊಮಾನಿ 6-4, 6-2 ರಲ್ಲಿ ಆದಿತ್ಯ ಮುತ್ತು ಸೆಲ್ವನ್ ಮೇಲೂ ಜಯ ಗಳಿಸಿದರು.<br /> <br /> ಎಂಎಸ್ಎಸ್ ಕೋರ್ಟ್ನಲ್ಲಿ ನಡೆದ ಬಾಲಕಿಯರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಮಹಾರಾಷ್ಟ್ರದ ಸ್ನೇಹಲ್ ಮಾನೆ 6-3, 6-3 ರಲ್ಲಿ ಕರ್ನಾಟಕದ ಶಿವಾನಿ ಮಂಜಣ್ಣ ಅವರನ್ನು ಮಣಿಸಿ 16ರ ಹಂತ ಪ್ರವೇಶಿಸಿದರು.<br /> <br /> ಇದೇ ವಿಭಾಗದ ಇತರ ಪಂದ್ಯಗಳಲ್ಲಿ ರಷ್ಮಿಕಾ ರಾಜನ್ 6-2, 6-2 ರಲ್ಲಿ ನಿಕಿತಾ ಪಿಂಟೊ ಎದುರೂ, ಲತಿಕಾ ಪ್ರೇಮ್ಕುಮಾರ್ 6-2, 6-7, 6-2 ರಲ್ಲಿ ಮುಸ್ಕಾನ್ ರಂಜನ್ ಮೇಲೂ ಜಯ ಸಾಧಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>