<p><strong>ಬೆಂಗಳೂರು:</strong> ನ್ಯಾಯಾಲಯದ ಆದೇಶ ಉಲ್ಲಂಘಿಸಿ ₹10 ಕೋಟಿ ಭೂಪರಿಹಾರ ವಿತರಿಸಿದ್ದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು, ಅದನ್ನು ವಸೂಲಿ ಮಾಡಲು 10 ವರ್ಷಗಳ ನಂತರ ಪ್ರಯತ್ನ ಆರಂಭಿಸಿದ್ದಾರೆ.</p>.<p>ದೇವನಹಳ್ಳಿ ತಾಲ್ಲೂಕಿನ ಜಾಲ ಹೋಬಳಿ ಬಂಡಿಕೋಡಿಗೇಹಳ್ಳಿ ಗ್ರಾಮದಲ್ಲಿ ಫಕ್ರುಲ್ಲಾಖಾನ್ ಎಂಬುವರು 1996ರಲ್ಲಿ ರೈತರಿಂದ 32 ಎಕರೆ ಜಮೀನು ಖರೀದಿಸಿದ್ದರು. ಮಾರಾಟ ಒಪ್ಪಂದ ಮತ್ತು ರೈತರಿಂದ ಪವರ್ ಆಫ್ ಅಟಾರ್ನಿ (ಜಿಪಿಎ) ಪಡೆದುಕೊಂಡಿದ್ದರು.</p>.<p>ಈ ನಡುವೆ 2005ರಲ್ಲಿ ಏರೋಸ್ಪೇಸ್ ಇನ್ಫರ್ಮೇಷನ್ ಟೆಕ್ನಾಲಜಿ ಮತ್ತು ಹಾರ್ಡ್ವೇರ್ ಪಾರ್ಕ್ ನಿರ್ಮಾಣಕ್ಕಾಗಿ ವಿಶೇಷ ಆರ್ಥಿಕ ವಲಯ (ಎಸ್ಇಜೆಡ್) ಸ್ಥಾಪನೆಗೆ ಸರ್ಕಾರ ಮುಂದಾಯಿತು. ಇದಕ್ಕಾಗಿ ಕೆಐಎಡಿಬಿ ಮೂಲಕ ಈ ಭೂಮಿಯ ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಿಸಲಾಯಿತು.</p>.<p>ಭೂ ಪರಿಹಾರಕ್ಕೆ ಫಕ್ರುಲ್ಲಾಖಾನ್ ಆರ್ಜಿ ಸಲ್ಲಿಸಿದ್ದರು. 2008ರ ಏಪ್ರಿಲ್ನಲ್ಲಿದ್ದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ (ಎಸ್ಎಲ್ಎಒ) ಟಿ.ಪಿ. ಮುನಿನಾರಾಯಣಪ್ಪ ಈ ಪ್ರಕ್ರಿಯೆ ನಡೆಸುತ್ತಿದ್ದರು. ಮೂಲ ಮಾಲೀಕರಿಗೆ ಪರಿಹಾರ ವಿತರಣೆ ಮಾಡಲಿರುವ ಮಾಹಿತಿ ಅರಿತ ಫಕ್ರುಲ್ಲಾಖಾನ್ ನ್ಯಾಯಾಲಯದ ಮೊರೆ ಹೋದರು.</p>.<p>ಭೂ ಮಾಲೀಕತ್ವದ ವಿವಾದ ಇರುವ ಕಾರಣ ಬಗೆಹರಿಯುವ ತನಕ ಪರಿಹಾರ ವಿತರಣೆ ಮಾಡದೆ ತನ್ನ ಬಳಿ ಠೇವಣಿ ಇಡುವಂತೆ ಭೂಸ್ವಾಧೀನಾಧಿಕಾರಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಆದರೂ, ಎಂಟು ಮಂದಿ ಮೂಲ ಮಾಲೀಕರಿಗೆ ಮುನಿನಾರಾಯಣಪ್ಪ ಪರಿಹಾರ ವಿತರಣೆ ಮಾಡಿದರು ಎಂದು ಫಕ್ರುಲ್ಲಾಖಾನ್ ಹೇಳಿದರು.</p>.<p>ಬಳಿಕ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಯಿತು. ಎಂಟು ಮಂದಿ ಭೂ ಮಾಲೀಕರು ವಂಚನೆ ಮಾಡಿ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ 2011ರಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.</p>.<p><strong>ಸ್ವಯಂ ನಿವೃತ್ತಿ:</strong> ಈ ನಡುವೆ 2008ರಲ್ಲಿ ಪರಿಹಾರ ವಿತರಣೆ ಮಾಡಿದ್ದ ಎಸ್ಎಲ್ಎಒ ಟಿ.ಪಿ. ಮುನಿನಾರಾಯಣಪ್ಪ, 2009ರ ಅಕ್ಟೋಬರ್ 16ರಂದು ಸ್ವಯಂ ನಿವೃತ್ತಿ ಪಡೆದಿದ್ದಾರೆ.</p>.<p>‘ಇವರ ವಿರುದ್ಧ ಕ್ರಮ ಕೈಗೊಳ್ಳದೆ ಕೆಐಎಡಿಬಿ ಮೌನವಾಗಿದ್ದ ಕಾರಣ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದೆ. ಅವರು ಆದೇಶ ನೀಡಿದ ಬಳಿಕ ಕ್ರಮ ಕೈಗೊಳ್ಳಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮುಂದಾಗಿದೆ’ ಎಂದು ಫಕ್ರುಲ್ಲಾಖಾನ್ ವಿವರಿಸಿದರು.</p>.<p>ನಿವೃತ್ತಿ ಪಡೆದು 4 ವರ್ಷ ಪೂರೈಸಿದ್ದರೆ ಕರ್ನಾಟಕ ಸೇವಾ ನಿಯಮಾವಳಿಗಳ ಪ್ರಕಾರ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ. ಹೀಗಾಗಿ, ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಸರಿಯಾದ ವಕೀಲರನ್ನು ಸರ್ಕಾರ ನೇಮಿಸಿದ ಕಾರಣ ತಪ್ಪು ಮಾಡಿದ ಅಧಿಕಾರಿಗೆ ನೋಟಿಸ್ ಕೂಡ ನೀಡಿಲ್ಲ ಎಂದು ಆರೋಪಿಸಿದರು.</p>.<p>**</p>.<p><strong>ಸ್ವಾಧೀನವೇ ಆಗದ ಭೂಮಿಗೆ ಪರಿಹಾರ</strong></p>.<p>ಭೂಸ್ವಾಧೀನವೇ ಆಗದ ಭೂಮಿಗೆ ₹1.25 ಕೋಟಿ ಪರಿಹಾರ ನೀಡಿರುವ ಕೆಐಎಡಿಬಿ ಅಧಿಕಾರಿಗಳು, 10 ವರ್ಷದ ಬಳಿಕ ಇಕ್ಕಟ್ಟಿಗೆ ಸಿಲುಕಿದ್ದಾರೆ. ಫಕ್ರುಲ್ಲಾಖಾನ್ ಖರೀದಿಸಿದ್ದ 32 ಎಕರೆಯಲ್ಲಿ ಸರ್ವೆ ನಂ.40ರ 25–ಪಿ ನಲ್ಲಿರುವ 4 ಎಕರೆ ಸ್ವಾಧೀನವಾಗಿಲ್ಲ. ಆದರೂ. 2008ರಲ್ಲೇ ₹1.25 ಕೋಟಿ ಹಣ ಲಕ್ಷ್ಮೀಪತಿ ಎಂಬುವರ ಹೆಸರಿಗೆ ಪಾವತಿಯಾಗಿದೆ.</p>.<p>ಹಣ ಪಡೆದವರ ಹೆಸರು ಚೆಕ್ ಸಂಖ್ಯೆ ಎಲ್ಲವನ್ನೂ ದಾಖಲಿಸಿರುವ ಅಧಿಕಾರಿಗಳು, ಈ ಭೂಮಿ ಅಧಿಸೂಚನೆಯಲ್ಲಿ ಸೇರಿಲ್ಲ ಎಂದೂ ದಾಖಲಿಸಿದ್ದಾರೆ. ಆದರೆ, ಈ ಭೂಮಿಯ ಬಗ್ಗೆ ಮಾಹಿತಿ ಕೇಳಿದರೆ, ಹಾಲಿ ಇರುವ ವಿಶೇಷ ಭೂಸ್ವಾಧೀನಾಧಿಕಾರಿ ಪೂರ್ಣಿಮಾ ಅವರು ಭೂಮಿ ಸ್ವಾಧೀನವಾಗಿದೆ ಎಂಬ ತಪ್ಪು ಮಾಹಿತಿ ನೀಡಿದ್ದಾರೆ.</p>.<p>ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಭಿಯೋಜನಾ ಮಂಜೂರಾತಿ ನೀಡುವಂತೆ ಫಕ್ರುಲ್ಲಾಖಾನ್ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಮನವಿಮಾಡಿದ್ದಾರೆ.</p>.<p>ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆಐಎಡಿಬಿಗೆ ಸೂಚನೆ ನೀಡಿದ್ದಾರೆ. ಸ್ವಾಧೀನವಾಗಿರುವ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರನ್ನು ತೆರವುಗೊಳಿಸುವಂತೆಯೂ ಪತ್ರದಲ್ಲಿ ತಿಳಿಸಿದ್ದಾರೆ.</p>.<p>**</p>.<p>ನನಗೆ ಮಾರಾಟ ಮಾಡಿ ಹಣ ಪಡೆದಿದ್ದಲ್ಲದೇ ಸರ್ಕಾರದಿಂದಲೂ ಪರಿಹಾರ ಪಡೆದಿರುವವರೇ ಈಗಲೂ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ.</p>.<p><em><strong>-ಫಕ್ರುಲ್ಲಾಖಾನ್, ದೂರುದಾರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನ್ಯಾಯಾಲಯದ ಆದೇಶ ಉಲ್ಲಂಘಿಸಿ ₹10 ಕೋಟಿ ಭೂಪರಿಹಾರ ವಿತರಿಸಿದ್ದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು, ಅದನ್ನು ವಸೂಲಿ ಮಾಡಲು 10 ವರ್ಷಗಳ ನಂತರ ಪ್ರಯತ್ನ ಆರಂಭಿಸಿದ್ದಾರೆ.</p>.<p>ದೇವನಹಳ್ಳಿ ತಾಲ್ಲೂಕಿನ ಜಾಲ ಹೋಬಳಿ ಬಂಡಿಕೋಡಿಗೇಹಳ್ಳಿ ಗ್ರಾಮದಲ್ಲಿ ಫಕ್ರುಲ್ಲಾಖಾನ್ ಎಂಬುವರು 1996ರಲ್ಲಿ ರೈತರಿಂದ 32 ಎಕರೆ ಜಮೀನು ಖರೀದಿಸಿದ್ದರು. ಮಾರಾಟ ಒಪ್ಪಂದ ಮತ್ತು ರೈತರಿಂದ ಪವರ್ ಆಫ್ ಅಟಾರ್ನಿ (ಜಿಪಿಎ) ಪಡೆದುಕೊಂಡಿದ್ದರು.</p>.<p>ಈ ನಡುವೆ 2005ರಲ್ಲಿ ಏರೋಸ್ಪೇಸ್ ಇನ್ಫರ್ಮೇಷನ್ ಟೆಕ್ನಾಲಜಿ ಮತ್ತು ಹಾರ್ಡ್ವೇರ್ ಪಾರ್ಕ್ ನಿರ್ಮಾಣಕ್ಕಾಗಿ ವಿಶೇಷ ಆರ್ಥಿಕ ವಲಯ (ಎಸ್ಇಜೆಡ್) ಸ್ಥಾಪನೆಗೆ ಸರ್ಕಾರ ಮುಂದಾಯಿತು. ಇದಕ್ಕಾಗಿ ಕೆಐಎಡಿಬಿ ಮೂಲಕ ಈ ಭೂಮಿಯ ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಿಸಲಾಯಿತು.</p>.<p>ಭೂ ಪರಿಹಾರಕ್ಕೆ ಫಕ್ರುಲ್ಲಾಖಾನ್ ಆರ್ಜಿ ಸಲ್ಲಿಸಿದ್ದರು. 2008ರ ಏಪ್ರಿಲ್ನಲ್ಲಿದ್ದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ (ಎಸ್ಎಲ್ಎಒ) ಟಿ.ಪಿ. ಮುನಿನಾರಾಯಣಪ್ಪ ಈ ಪ್ರಕ್ರಿಯೆ ನಡೆಸುತ್ತಿದ್ದರು. ಮೂಲ ಮಾಲೀಕರಿಗೆ ಪರಿಹಾರ ವಿತರಣೆ ಮಾಡಲಿರುವ ಮಾಹಿತಿ ಅರಿತ ಫಕ್ರುಲ್ಲಾಖಾನ್ ನ್ಯಾಯಾಲಯದ ಮೊರೆ ಹೋದರು.</p>.<p>ಭೂ ಮಾಲೀಕತ್ವದ ವಿವಾದ ಇರುವ ಕಾರಣ ಬಗೆಹರಿಯುವ ತನಕ ಪರಿಹಾರ ವಿತರಣೆ ಮಾಡದೆ ತನ್ನ ಬಳಿ ಠೇವಣಿ ಇಡುವಂತೆ ಭೂಸ್ವಾಧೀನಾಧಿಕಾರಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಆದರೂ, ಎಂಟು ಮಂದಿ ಮೂಲ ಮಾಲೀಕರಿಗೆ ಮುನಿನಾರಾಯಣಪ್ಪ ಪರಿಹಾರ ವಿತರಣೆ ಮಾಡಿದರು ಎಂದು ಫಕ್ರುಲ್ಲಾಖಾನ್ ಹೇಳಿದರು.</p>.<p>ಬಳಿಕ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಯಿತು. ಎಂಟು ಮಂದಿ ಭೂ ಮಾಲೀಕರು ವಂಚನೆ ಮಾಡಿ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ 2011ರಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.</p>.<p><strong>ಸ್ವಯಂ ನಿವೃತ್ತಿ:</strong> ಈ ನಡುವೆ 2008ರಲ್ಲಿ ಪರಿಹಾರ ವಿತರಣೆ ಮಾಡಿದ್ದ ಎಸ್ಎಲ್ಎಒ ಟಿ.ಪಿ. ಮುನಿನಾರಾಯಣಪ್ಪ, 2009ರ ಅಕ್ಟೋಬರ್ 16ರಂದು ಸ್ವಯಂ ನಿವೃತ್ತಿ ಪಡೆದಿದ್ದಾರೆ.</p>.<p>‘ಇವರ ವಿರುದ್ಧ ಕ್ರಮ ಕೈಗೊಳ್ಳದೆ ಕೆಐಎಡಿಬಿ ಮೌನವಾಗಿದ್ದ ಕಾರಣ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದೆ. ಅವರು ಆದೇಶ ನೀಡಿದ ಬಳಿಕ ಕ್ರಮ ಕೈಗೊಳ್ಳಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮುಂದಾಗಿದೆ’ ಎಂದು ಫಕ್ರುಲ್ಲಾಖಾನ್ ವಿವರಿಸಿದರು.</p>.<p>ನಿವೃತ್ತಿ ಪಡೆದು 4 ವರ್ಷ ಪೂರೈಸಿದ್ದರೆ ಕರ್ನಾಟಕ ಸೇವಾ ನಿಯಮಾವಳಿಗಳ ಪ್ರಕಾರ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ. ಹೀಗಾಗಿ, ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಸರಿಯಾದ ವಕೀಲರನ್ನು ಸರ್ಕಾರ ನೇಮಿಸಿದ ಕಾರಣ ತಪ್ಪು ಮಾಡಿದ ಅಧಿಕಾರಿಗೆ ನೋಟಿಸ್ ಕೂಡ ನೀಡಿಲ್ಲ ಎಂದು ಆರೋಪಿಸಿದರು.</p>.<p>**</p>.<p><strong>ಸ್ವಾಧೀನವೇ ಆಗದ ಭೂಮಿಗೆ ಪರಿಹಾರ</strong></p>.<p>ಭೂಸ್ವಾಧೀನವೇ ಆಗದ ಭೂಮಿಗೆ ₹1.25 ಕೋಟಿ ಪರಿಹಾರ ನೀಡಿರುವ ಕೆಐಎಡಿಬಿ ಅಧಿಕಾರಿಗಳು, 10 ವರ್ಷದ ಬಳಿಕ ಇಕ್ಕಟ್ಟಿಗೆ ಸಿಲುಕಿದ್ದಾರೆ. ಫಕ್ರುಲ್ಲಾಖಾನ್ ಖರೀದಿಸಿದ್ದ 32 ಎಕರೆಯಲ್ಲಿ ಸರ್ವೆ ನಂ.40ರ 25–ಪಿ ನಲ್ಲಿರುವ 4 ಎಕರೆ ಸ್ವಾಧೀನವಾಗಿಲ್ಲ. ಆದರೂ. 2008ರಲ್ಲೇ ₹1.25 ಕೋಟಿ ಹಣ ಲಕ್ಷ್ಮೀಪತಿ ಎಂಬುವರ ಹೆಸರಿಗೆ ಪಾವತಿಯಾಗಿದೆ.</p>.<p>ಹಣ ಪಡೆದವರ ಹೆಸರು ಚೆಕ್ ಸಂಖ್ಯೆ ಎಲ್ಲವನ್ನೂ ದಾಖಲಿಸಿರುವ ಅಧಿಕಾರಿಗಳು, ಈ ಭೂಮಿ ಅಧಿಸೂಚನೆಯಲ್ಲಿ ಸೇರಿಲ್ಲ ಎಂದೂ ದಾಖಲಿಸಿದ್ದಾರೆ. ಆದರೆ, ಈ ಭೂಮಿಯ ಬಗ್ಗೆ ಮಾಹಿತಿ ಕೇಳಿದರೆ, ಹಾಲಿ ಇರುವ ವಿಶೇಷ ಭೂಸ್ವಾಧೀನಾಧಿಕಾರಿ ಪೂರ್ಣಿಮಾ ಅವರು ಭೂಮಿ ಸ್ವಾಧೀನವಾಗಿದೆ ಎಂಬ ತಪ್ಪು ಮಾಹಿತಿ ನೀಡಿದ್ದಾರೆ.</p>.<p>ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಭಿಯೋಜನಾ ಮಂಜೂರಾತಿ ನೀಡುವಂತೆ ಫಕ್ರುಲ್ಲಾಖಾನ್ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಮನವಿಮಾಡಿದ್ದಾರೆ.</p>.<p>ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆಐಎಡಿಬಿಗೆ ಸೂಚನೆ ನೀಡಿದ್ದಾರೆ. ಸ್ವಾಧೀನವಾಗಿರುವ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರನ್ನು ತೆರವುಗೊಳಿಸುವಂತೆಯೂ ಪತ್ರದಲ್ಲಿ ತಿಳಿಸಿದ್ದಾರೆ.</p>.<p>**</p>.<p>ನನಗೆ ಮಾರಾಟ ಮಾಡಿ ಹಣ ಪಡೆದಿದ್ದಲ್ಲದೇ ಸರ್ಕಾರದಿಂದಲೂ ಪರಿಹಾರ ಪಡೆದಿರುವವರೇ ಈಗಲೂ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ.</p>.<p><em><strong>-ಫಕ್ರುಲ್ಲಾಖಾನ್, ದೂರುದಾರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>