<p><strong>ಬೆಂಗಳೂರು:</strong> ‘ಪೂಜೆ ಮಾಡುವುದು ಮುಖ್ಯವಲ್ಲ. ಕೆಲಸವನ್ನು ಕಾಯ–ವಾಚಾ–ಮನಸಾದಿಂದ ಮಾಡಿದರೆ ಅದುವೇ ದೊಡ್ಡ ಪೂಜೆ’ ಎಂದು ರಂಗಕರ್ಮಿ ಬಿ.ಜಯಶ್ರೀ ಹೇಳಿದರು.</p>.<p>ಬಸವ ವೇದಿಕೆಯು ಭಾನುವಾರ ಆಯೋಜಿಸಿದ್ದ ‘ಬಸವ ಜಯಂತಿ ಹಾಗೂ ಬಸವಶ್ರೀ, ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಅವರು ಮಾತನಾಡಿದರು.</p>.<p>‘ನಾವು ಶರಣರ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಅವರ ತತ್ವಾದರ್ಶಗಳನ್ನು ಪಾಲಿಸುವುದಿಲ್ಲ. ಪೂಜೆ–ಪುನಸ್ಕಾರಗಳಿಗಿಂತ ಕಾಯಕವೇ ಮುಖ್ಯ. ಇದನ್ನು ಶರಣರು ಸಹ ಪ್ರತಿಪಾದಿಸಿದ್ದಾರೆ’ ಎಂದರು.</p>.<p>ಮೂಡುಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ ಆಳ್ವ, ‘ಬಸವಣ್ಣ ಅವರು ಭಕ್ತಿ ಮತ್ತು ಕಾಯಕ ತತ್ವ ಪ್ರತಿಪಾದಿಸಿದ್ದಾರೆ. ಈ ಎರಡಕ್ಕೂ ಸಂಬಂಧವಿದೆ. ಕೇವಲ ಪೂಜೆ ಮಾಡುವುದರಿಂದ ಜೀವನ ಹಸನಾಗುವುದಿಲ್ಲ. ಬಸವ ತತ್ವವನ್ನು ಜಾತಿ, ಮತ, ದೇಶಕ್ಕೆ ಸೀಮಿತಗೊಳಿಸದೆ ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ‘ವಚನ ಸಾಹಿತ್ಯವನ್ನು ಬೇರ್ಪಡಿಸಿದರೆಕನ್ನಡ ಸಾಹಿತ್ಯದ ಘನತೆ, ಗೌರವವೇ ಕಡಿಮೆ ಆಗುತ್ತದೆ. ವಚನಗಳು ಸಾಹಿತ್ಯದ ಪ್ರಮುಖ ಭಾಗವಾಗಿವೆ. ವಚನಗಳನ್ನು ಓದಿ ಪಚನ ಮಾಡಿಕೊಳ್ಳಬೇಕು’ ಎಂದು ಸಂದೇಶ ನೀಡಿದರು.</p>.<p>ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ.ಮೊಗಸಾಲೆ, ‘ಬಸವಣ್ಣ ಅವರು ಮನೋ ಮತ್ತು ಸಮಾಜ ವಿಜ್ಞಾನಿಯಾಗಿ ಅಲಿಖಿತ ಸಂವಿಧಾನ ರಚಿಸಿದ್ದಾರೆ. ಅದು ಈಗಿನ ಸಂವಿಧಾನಕ್ಕಿಂತ ಒಂದು ಮೆಟ್ಟಿಲು ಮೇಲಿದೆ. ವಿಷಾದವೆಂದರೆ ನಾವು ಬಸವಣ್ಣರ ಸಂವಿಧಾನಕ್ಕೆ ಅಪಚಾರ ಮಾಡುತ್ತಾ ಸಾಗಿದ್ದೇವೆ’ ಎಂದರು.</p>.<p>ಎ.ಎಸ್.ಕಿರಣ್ ಕುಮಾರ್ ಅವರಿಗೆ ‘ಬಸವಶ್ರೀ’ ಹಾಗೂ ಕವಿ ಜರಗನಹಳ್ಳಿ ಶಿವಶಂಕರ್ ಮತ್ತು ನಾ.ಮೊಗಸಾಲೆ ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತ್ಯಶ್ರೀ ಪ್ರಶಸ್ತಿಯು ₹ 10 ಸಾವಿರ ಒಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪೂಜೆ ಮಾಡುವುದು ಮುಖ್ಯವಲ್ಲ. ಕೆಲಸವನ್ನು ಕಾಯ–ವಾಚಾ–ಮನಸಾದಿಂದ ಮಾಡಿದರೆ ಅದುವೇ ದೊಡ್ಡ ಪೂಜೆ’ ಎಂದು ರಂಗಕರ್ಮಿ ಬಿ.ಜಯಶ್ರೀ ಹೇಳಿದರು.</p>.<p>ಬಸವ ವೇದಿಕೆಯು ಭಾನುವಾರ ಆಯೋಜಿಸಿದ್ದ ‘ಬಸವ ಜಯಂತಿ ಹಾಗೂ ಬಸವಶ್ರೀ, ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಅವರು ಮಾತನಾಡಿದರು.</p>.<p>‘ನಾವು ಶರಣರ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಅವರ ತತ್ವಾದರ್ಶಗಳನ್ನು ಪಾಲಿಸುವುದಿಲ್ಲ. ಪೂಜೆ–ಪುನಸ್ಕಾರಗಳಿಗಿಂತ ಕಾಯಕವೇ ಮುಖ್ಯ. ಇದನ್ನು ಶರಣರು ಸಹ ಪ್ರತಿಪಾದಿಸಿದ್ದಾರೆ’ ಎಂದರು.</p>.<p>ಮೂಡುಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ ಆಳ್ವ, ‘ಬಸವಣ್ಣ ಅವರು ಭಕ್ತಿ ಮತ್ತು ಕಾಯಕ ತತ್ವ ಪ್ರತಿಪಾದಿಸಿದ್ದಾರೆ. ಈ ಎರಡಕ್ಕೂ ಸಂಬಂಧವಿದೆ. ಕೇವಲ ಪೂಜೆ ಮಾಡುವುದರಿಂದ ಜೀವನ ಹಸನಾಗುವುದಿಲ್ಲ. ಬಸವ ತತ್ವವನ್ನು ಜಾತಿ, ಮತ, ದೇಶಕ್ಕೆ ಸೀಮಿತಗೊಳಿಸದೆ ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ‘ವಚನ ಸಾಹಿತ್ಯವನ್ನು ಬೇರ್ಪಡಿಸಿದರೆಕನ್ನಡ ಸಾಹಿತ್ಯದ ಘನತೆ, ಗೌರವವೇ ಕಡಿಮೆ ಆಗುತ್ತದೆ. ವಚನಗಳು ಸಾಹಿತ್ಯದ ಪ್ರಮುಖ ಭಾಗವಾಗಿವೆ. ವಚನಗಳನ್ನು ಓದಿ ಪಚನ ಮಾಡಿಕೊಳ್ಳಬೇಕು’ ಎಂದು ಸಂದೇಶ ನೀಡಿದರು.</p>.<p>ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ.ಮೊಗಸಾಲೆ, ‘ಬಸವಣ್ಣ ಅವರು ಮನೋ ಮತ್ತು ಸಮಾಜ ವಿಜ್ಞಾನಿಯಾಗಿ ಅಲಿಖಿತ ಸಂವಿಧಾನ ರಚಿಸಿದ್ದಾರೆ. ಅದು ಈಗಿನ ಸಂವಿಧಾನಕ್ಕಿಂತ ಒಂದು ಮೆಟ್ಟಿಲು ಮೇಲಿದೆ. ವಿಷಾದವೆಂದರೆ ನಾವು ಬಸವಣ್ಣರ ಸಂವಿಧಾನಕ್ಕೆ ಅಪಚಾರ ಮಾಡುತ್ತಾ ಸಾಗಿದ್ದೇವೆ’ ಎಂದರು.</p>.<p>ಎ.ಎಸ್.ಕಿರಣ್ ಕುಮಾರ್ ಅವರಿಗೆ ‘ಬಸವಶ್ರೀ’ ಹಾಗೂ ಕವಿ ಜರಗನಹಳ್ಳಿ ಶಿವಶಂಕರ್ ಮತ್ತು ನಾ.ಮೊಗಸಾಲೆ ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತ್ಯಶ್ರೀ ಪ್ರಶಸ್ತಿಯು ₹ 10 ಸಾವಿರ ಒಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>