<p><strong>ಬೆಂಗಳೂರು:</strong>‘ಬಸವಣ್ಣನವರುಯಾವ ವೈದಿಕತೆಯನ್ನು ಶೋಷಣೆಯ ಮಹಾಪ್ರವಾಹ ಎಂದುಕೊಂಡು ಅದರ ವಿರುದ್ಧ ನಿರಂತರವಾಗಿ ಹೋರಾಟ ಮಾಡಿದರೋ, ಅದೇ ವೈದಿಕತೆ ಪ್ರಸ್ತುತ ಛದ್ಮವೇಷ ತೊಟ್ಟು ಅವರನ್ನು ಕರೆದೊಯ್ಯುತ್ತಿದೆ’ ಎಂದುವಿಮರ್ಶಕಿ ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.</p>.<p>ಜಾಗತಿಕ ಲಿಂಗಾಯತ ಮಹಾಸಭಾವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಯಾವ ಕಾಲಘಟ್ಟದಲ್ಲೂ ಇರದ ಅಸಹನೆ ಪ್ರಸ್ತುತ ಇದೆ. ಇನ್ನೊಬ್ಬರ ವಿಚಾರಗಳನ್ನು ಗೌರವಿಸುವುದಿರಲಿ ಸಹಿಸಿಕೊಳ್ಳುವ ಮನಸ್ಸುಗಳೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಬದುಕಿನುದ್ದಕ್ಕೂ ಸಮಾನತೆಗಾಗಿ ಹಂಬಲಿಸಿದಬಸವಣ್ಣನವರಮಾನವೀಯತೆಯ ಮದ್ದಿನ ಮೂಲಕ ಅಸಹಿಷ್ಣುತೆಗೆ ಚಿಕಿತ್ಸೆ ನೀಡಬೇಕು. ಆ ಶಕ್ತಿ ಬಸವಣ್ಣನವರ ಅಂತಃಕರಣಕ್ಕಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಬಸವಣ್ಣನವರು ದಲಿತರ ಪ್ರಶ್ನೆಗಳಿಗೆ ಮನಸ್ಸಿನಾಳದಿಂದ ಉತ್ತರಿಸಿದರು. ಆದರೆ, ಹೆಣ್ಣಿನ ವಿಚಾರದಲ್ಲಿ ಅವರಿಗದು ಸಾಧ್ಯವಾಗಲಿಲ್ಲ. ಆದರೂ, ಗಂಡು ಹೆಣ್ಣಿನ ಸಂಬಂಧವನ್ನುಸೂಕ್ಷ್ಮವಾಗಿ ವಿವರಿಸಿದರು’ ಎಂದು ಹೇಳಿದರು.</p>.<p>‘ಬೌದ್ಧ ಧರ್ಮಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಿಕ್ಕ ರೀತಿಯಲ್ಲಿ ಲಿಂಗಾಯತ ಧರ್ಮಕ್ಕೆ ಯಾಕೆ ಒಬ್ಬ ಸೂಕ್ತ ನಾಯಕ ಸಿಗುತ್ತಿಲ್ಲ? ಬೌದ್ಧ ಧರ್ಮದಲ್ಲಿ ಅಂಬೇಡ್ಕರ್ ಅವರು ಮಾಡಿದ ಕೆಲಸವನ್ನು ಜಾಗತಿಕ ಲಿಂಗಾಯತ ಮಹಾಸಭಾ ಮಾಡಲಿ’ ಎಂದು ಆಶಿಸಿದರು.</p>.<p>ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ,‘ಸಂಘಟನಾತ್ಮಕವಾದ ಪ್ರಜಾಪ್ರಭುತ್ವದ ನೆಲೆಯಲ್ಲಿ ರೂಪಿತವಾದ ಧರ್ಮ ಶರಣ ಧರ್ಮ. ಈ ಧರ್ಮಕ್ಕೆ ಅಂತರಂಗ ಹಾಗೂ ಬಹಿರಂಗದ ಕುಲುಮೆಯಲ್ಲಿ ಜನ್ಮತಾಳಿದ ವಚನ ಸಾಹಿತ್ಯವೇ ಧರ್ಮಗ್ರಂಥ’ ಎಂದು ಹೇಳಿದರು.</p>.<p>‘ಮೇಲ್ವರ್ಗದ ಜಾತಿ ವ್ಯವಸ್ಥೆಯ ಆಚರಣೆಬಸವಣ್ಣ ಅವರನ್ನು ನೈತಿಕ ಸಂಕಟವಾಗಿ ಕಾಡಿತ್ತು. ಮೇಲ್ವರ್ಗದಲ್ಲಿ ಹುಟ್ಟಿದ್ದಾನೆ ಎನ್ನುವ ಪಾಪದ ಭಾರವನ್ನು ನನ್ನ ಮೇಲೆ ಹೊರಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು’ ಎಂದರು.</p>.<p>ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ,‘ಸಮ ಸಮಾಜವನ್ನು ಕಟ್ಟಲು ಶ್ರಮಿಸಿದ ಬಸವಣ್ಣನವರ ಸಿದ್ಧಾಂತವನ್ನು ನಿತ್ಯ ಜೀವನದಲ್ಲಿ ಆಚರಣೆಗೆ ತರಬೇಕಾಗಿದೆ’ ಎಂದರು.</p>.<p>‘102 ಉಪಜಾತಿಗಳಲ್ಲಿ ವೀರಶೈವವೂ ಒಂದು. ಅದು ಉಪಜಾತಿಯಾಗಿದ್ದರೆ ಇರಲಿ. ಇಲ್ಲದಿದ್ದರೆ ಹೊರ ಹೋಗಲಿ. ಧರ್ಮ ಒಡೆಯುವುದು ನಮ್ಮ ಉದ್ದೇಶವಲ್ಲ. ಜೀವಪರ ಧರ್ಮವನ್ನು ಪ್ರಚುರಪಡಿಸುವುದು ನಮ್ಮ ಉದ್ದೇಶ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>‘ಬಸವಣ್ಣನವರುಯಾವ ವೈದಿಕತೆಯನ್ನು ಶೋಷಣೆಯ ಮಹಾಪ್ರವಾಹ ಎಂದುಕೊಂಡು ಅದರ ವಿರುದ್ಧ ನಿರಂತರವಾಗಿ ಹೋರಾಟ ಮಾಡಿದರೋ, ಅದೇ ವೈದಿಕತೆ ಪ್ರಸ್ತುತ ಛದ್ಮವೇಷ ತೊಟ್ಟು ಅವರನ್ನು ಕರೆದೊಯ್ಯುತ್ತಿದೆ’ ಎಂದುವಿಮರ್ಶಕಿ ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.</p>.<p>ಜಾಗತಿಕ ಲಿಂಗಾಯತ ಮಹಾಸಭಾವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಯಾವ ಕಾಲಘಟ್ಟದಲ್ಲೂ ಇರದ ಅಸಹನೆ ಪ್ರಸ್ತುತ ಇದೆ. ಇನ್ನೊಬ್ಬರ ವಿಚಾರಗಳನ್ನು ಗೌರವಿಸುವುದಿರಲಿ ಸಹಿಸಿಕೊಳ್ಳುವ ಮನಸ್ಸುಗಳೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಬದುಕಿನುದ್ದಕ್ಕೂ ಸಮಾನತೆಗಾಗಿ ಹಂಬಲಿಸಿದಬಸವಣ್ಣನವರಮಾನವೀಯತೆಯ ಮದ್ದಿನ ಮೂಲಕ ಅಸಹಿಷ್ಣುತೆಗೆ ಚಿಕಿತ್ಸೆ ನೀಡಬೇಕು. ಆ ಶಕ್ತಿ ಬಸವಣ್ಣನವರ ಅಂತಃಕರಣಕ್ಕಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಬಸವಣ್ಣನವರು ದಲಿತರ ಪ್ರಶ್ನೆಗಳಿಗೆ ಮನಸ್ಸಿನಾಳದಿಂದ ಉತ್ತರಿಸಿದರು. ಆದರೆ, ಹೆಣ್ಣಿನ ವಿಚಾರದಲ್ಲಿ ಅವರಿಗದು ಸಾಧ್ಯವಾಗಲಿಲ್ಲ. ಆದರೂ, ಗಂಡು ಹೆಣ್ಣಿನ ಸಂಬಂಧವನ್ನುಸೂಕ್ಷ್ಮವಾಗಿ ವಿವರಿಸಿದರು’ ಎಂದು ಹೇಳಿದರು.</p>.<p>‘ಬೌದ್ಧ ಧರ್ಮಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಿಕ್ಕ ರೀತಿಯಲ್ಲಿ ಲಿಂಗಾಯತ ಧರ್ಮಕ್ಕೆ ಯಾಕೆ ಒಬ್ಬ ಸೂಕ್ತ ನಾಯಕ ಸಿಗುತ್ತಿಲ್ಲ? ಬೌದ್ಧ ಧರ್ಮದಲ್ಲಿ ಅಂಬೇಡ್ಕರ್ ಅವರು ಮಾಡಿದ ಕೆಲಸವನ್ನು ಜಾಗತಿಕ ಲಿಂಗಾಯತ ಮಹಾಸಭಾ ಮಾಡಲಿ’ ಎಂದು ಆಶಿಸಿದರು.</p>.<p>ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ,‘ಸಂಘಟನಾತ್ಮಕವಾದ ಪ್ರಜಾಪ್ರಭುತ್ವದ ನೆಲೆಯಲ್ಲಿ ರೂಪಿತವಾದ ಧರ್ಮ ಶರಣ ಧರ್ಮ. ಈ ಧರ್ಮಕ್ಕೆ ಅಂತರಂಗ ಹಾಗೂ ಬಹಿರಂಗದ ಕುಲುಮೆಯಲ್ಲಿ ಜನ್ಮತಾಳಿದ ವಚನ ಸಾಹಿತ್ಯವೇ ಧರ್ಮಗ್ರಂಥ’ ಎಂದು ಹೇಳಿದರು.</p>.<p>‘ಮೇಲ್ವರ್ಗದ ಜಾತಿ ವ್ಯವಸ್ಥೆಯ ಆಚರಣೆಬಸವಣ್ಣ ಅವರನ್ನು ನೈತಿಕ ಸಂಕಟವಾಗಿ ಕಾಡಿತ್ತು. ಮೇಲ್ವರ್ಗದಲ್ಲಿ ಹುಟ್ಟಿದ್ದಾನೆ ಎನ್ನುವ ಪಾಪದ ಭಾರವನ್ನು ನನ್ನ ಮೇಲೆ ಹೊರಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು’ ಎಂದರು.</p>.<p>ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ,‘ಸಮ ಸಮಾಜವನ್ನು ಕಟ್ಟಲು ಶ್ರಮಿಸಿದ ಬಸವಣ್ಣನವರ ಸಿದ್ಧಾಂತವನ್ನು ನಿತ್ಯ ಜೀವನದಲ್ಲಿ ಆಚರಣೆಗೆ ತರಬೇಕಾಗಿದೆ’ ಎಂದರು.</p>.<p>‘102 ಉಪಜಾತಿಗಳಲ್ಲಿ ವೀರಶೈವವೂ ಒಂದು. ಅದು ಉಪಜಾತಿಯಾಗಿದ್ದರೆ ಇರಲಿ. ಇಲ್ಲದಿದ್ದರೆ ಹೊರ ಹೋಗಲಿ. ಧರ್ಮ ಒಡೆಯುವುದು ನಮ್ಮ ಉದ್ದೇಶವಲ್ಲ. ಜೀವಪರ ಧರ್ಮವನ್ನು ಪ್ರಚುರಪಡಿಸುವುದು ನಮ್ಮ ಉದ್ದೇಶ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>