<p><strong>ಬೆಂಗಳೂರು:</strong> ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ ಹಾಗೂ ಚಿನ್ನಾಭರಣ ದೋಚುತ್ತಿದ್ದ ಆರೋಪಿಗಳಿಬ್ಬರನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು, ಅರ್ಧ ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ.</p>.<p>ಹನುಮಂತನಗರದ ಚಾಂದ್ ಪಾಷಾ (32) ಹಾಗೂ ಸೈಯದ್ ಅಕ್ರಂ (40) ಬಂಧಿತರು. ಇಬ್ಬರೂ ಭದ್ರಾವತಿ ತಾಲ್ಲೂಕಿನವರಾಗಿದ್ದು, ಕಳ್ಳತನ ಮಾಡುವುದಕ್ಕಾಗಿಯೇ ನಗರಕ್ಕೆ ಬಂದು ನೆಲೆಸಿದ್ದರು. ಇವರ ಬಂಧನದಿಂದ ಒಂಬತ್ತು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಬೆಳಿಗ್ಗೆ ಹಾಗೂ ಸಂಜೆ ವೇಳೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಇವರು, ಹೆಚ್ಚು ಪ್ರಯಾಣಿಕರಿರುವ ಬಸ್ಗಳನ್ನೇ ಹತ್ತುತ್ತಿದ್ದರು. ಚಿನ್ನದ ಸರ ತೊಟ್ಟಿರುವ ಮಹಿಳೆಯ ಹಿಂದೆಯೇ ನಿಂತುಕೊಂಡು, ಅವರ ಗಮನಕ್ಕೆ ಬಾರದಂತೆ ಸರ ಎಗರಿಸುತ್ತಿದ್ದರು. ನಂತರ ಮುಂದಿನ ನಿಲ್ದಾಣದಲ್ಲೇ ಇಳಿದು ಹೋಗುತ್ತಿದ್ದರು.</p>.<p>ಆಭರಣ ಕಳೆದುಕೊಂಡವರು, ಉಪ್ಪಾರಪೇಟೆ ಠಾಣೆಯ ಮೆಟ್ಟಿಲೇರಿದ್ದರು. ಮೆಜೆಸ್ಟಿಕ್ ನಿಲ್ದಾಣದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಹಳೇ ಆರೋಪಿಗಳಾದ ಪಾಷಾ ಹಾಗೂ ಅಕ್ರಂನ ಚಹರೆ ಸಿಕ್ಕಿತ್ತು. ಹನುಮಂತನಗರದ ಮನೆಯಲ್ಲೇ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರು ತಪ್ಪೊಪ್ಪಿಕೊಂಡಿದ್ದಾರೆ.</p>.<p><strong>ಬಸ್ಗಳಲ್ಲಿ ಜೇಬುಗಳ್ಳರ ಫೋಟೊ</strong></p>.<p>‘ಬಿಎಂಟಿಸಿ ಬಸ್ಗಳಲ್ಲಿ ಪಿಕ್ ಪಾಕೆಟ್ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರಯಾಣಿಕರೂ ಎಚ್ಚರಿಕೆಯಿಂದ ಇರಬೇಕು. ಎಲ್ಲ ಬಸ್ಗಳಲ್ಲೂ ಜೇಬುಗಳ್ಳರ ಫೋಟೊಗಳನ್ನು ಅಂಟಿಸುವ ಬಗ್ಗೆ ಬಿಎಂಟಿಸಿ ಅಧಿಕಾರಿಗಳ ಜತೆ ಈಗಾಗಲೇ ಚರ್ಚಿಸಿದ್ದೇನೆ. ಪ್ರಯಾಣಿಕರು ಇನ್ನು ಮುಂದಾದರೂ ಆ ಫೋಟೊಗಳನ್ನು ನೋಡಿಕೊಂಡು, ತಮ್ಮ ಅಕ್ಕ–ಪಕ್ಕ ನಿಂತಿರುವವರ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ ಹಾಗೂ ಚಿನ್ನಾಭರಣ ದೋಚುತ್ತಿದ್ದ ಆರೋಪಿಗಳಿಬ್ಬರನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು, ಅರ್ಧ ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ.</p>.<p>ಹನುಮಂತನಗರದ ಚಾಂದ್ ಪಾಷಾ (32) ಹಾಗೂ ಸೈಯದ್ ಅಕ್ರಂ (40) ಬಂಧಿತರು. ಇಬ್ಬರೂ ಭದ್ರಾವತಿ ತಾಲ್ಲೂಕಿನವರಾಗಿದ್ದು, ಕಳ್ಳತನ ಮಾಡುವುದಕ್ಕಾಗಿಯೇ ನಗರಕ್ಕೆ ಬಂದು ನೆಲೆಸಿದ್ದರು. ಇವರ ಬಂಧನದಿಂದ ಒಂಬತ್ತು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಬೆಳಿಗ್ಗೆ ಹಾಗೂ ಸಂಜೆ ವೇಳೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಇವರು, ಹೆಚ್ಚು ಪ್ರಯಾಣಿಕರಿರುವ ಬಸ್ಗಳನ್ನೇ ಹತ್ತುತ್ತಿದ್ದರು. ಚಿನ್ನದ ಸರ ತೊಟ್ಟಿರುವ ಮಹಿಳೆಯ ಹಿಂದೆಯೇ ನಿಂತುಕೊಂಡು, ಅವರ ಗಮನಕ್ಕೆ ಬಾರದಂತೆ ಸರ ಎಗರಿಸುತ್ತಿದ್ದರು. ನಂತರ ಮುಂದಿನ ನಿಲ್ದಾಣದಲ್ಲೇ ಇಳಿದು ಹೋಗುತ್ತಿದ್ದರು.</p>.<p>ಆಭರಣ ಕಳೆದುಕೊಂಡವರು, ಉಪ್ಪಾರಪೇಟೆ ಠಾಣೆಯ ಮೆಟ್ಟಿಲೇರಿದ್ದರು. ಮೆಜೆಸ್ಟಿಕ್ ನಿಲ್ದಾಣದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಹಳೇ ಆರೋಪಿಗಳಾದ ಪಾಷಾ ಹಾಗೂ ಅಕ್ರಂನ ಚಹರೆ ಸಿಕ್ಕಿತ್ತು. ಹನುಮಂತನಗರದ ಮನೆಯಲ್ಲೇ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರು ತಪ್ಪೊಪ್ಪಿಕೊಂಡಿದ್ದಾರೆ.</p>.<p><strong>ಬಸ್ಗಳಲ್ಲಿ ಜೇಬುಗಳ್ಳರ ಫೋಟೊ</strong></p>.<p>‘ಬಿಎಂಟಿಸಿ ಬಸ್ಗಳಲ್ಲಿ ಪಿಕ್ ಪಾಕೆಟ್ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರಯಾಣಿಕರೂ ಎಚ್ಚರಿಕೆಯಿಂದ ಇರಬೇಕು. ಎಲ್ಲ ಬಸ್ಗಳಲ್ಲೂ ಜೇಬುಗಳ್ಳರ ಫೋಟೊಗಳನ್ನು ಅಂಟಿಸುವ ಬಗ್ಗೆ ಬಿಎಂಟಿಸಿ ಅಧಿಕಾರಿಗಳ ಜತೆ ಈಗಾಗಲೇ ಚರ್ಚಿಸಿದ್ದೇನೆ. ಪ್ರಯಾಣಿಕರು ಇನ್ನು ಮುಂದಾದರೂ ಆ ಫೋಟೊಗಳನ್ನು ನೋಡಿಕೊಂಡು, ತಮ್ಮ ಅಕ್ಕ–ಪಕ್ಕ ನಿಂತಿರುವವರ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>