<p><strong>ದೆಹಲಿ: </strong>ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿಸುಪ್ರಿಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ನ್ಯಾಯಾಲಯದ ಆಂತರಿಕ ಸಮಿತಿಯು ಕ್ಲೀನ್ ಚಿಟ್ ನೀಡಿರುವುದರಿಂದಆಕ್ರೋಶಗೊಂಡಿರುವ ದೂರುದಾರ ಮಹಿಳೆ, ಸಮಿತಿಯತನಿಖಾ ವರದಿಯ ಪ್ರತಿಯನ್ನು ತಮಗೂ ನೀಡಬೇಕು ಎಂದುಆಗ್ರಹಿಸಿದ್ದಾರೆ. ಅಲ್ಲದೆ, ತನಿಖಾ ವರದಿಯನ್ನು ನೀಡದೇ ಇರುವುದು ನ್ಯಾಯಾಂಗದ ದುರಂತ ಎಂದು ಅವರು ಹೇಳಿದ್ದಾರೆ.</p>.<p>ವಿಚಾರಣೆಯನ್ನು ಮಹಿಳೆ ಬಹಿಷ್ಕರಿಸಿರುವುದಾಗಿ ಹೇಳಿದ್ದರೂ, ವಿಚಾರಣೆ ಮುಂದುವರಿಸಿದ್ದನ್ಯಾಯಾಲಯದ ಆಂತರಿಕ ಸಮಿತಿಯು ಸೋಮವಾರ ಸಿಜೆಐ ಗೊಗೊಯಿ ಅವರಿಗೆಕ್ಲೀನ್ ಚಿಟ್ ನೀಡಿತ್ತು. ಪ್ರಕರಣದಲ್ಲಿ ಹುರುಳಿಲ್ಲ ಎಂದಿತ್ತು. ಎಲ್ಲಕ್ಕೂ ಮುಖ್ಯವಾಗಿತನಿಖೆಯವರದಿಯ ಪ್ರತಿಯನ್ನುದೂರುದಾರ ಮಹಿಳೆಗೆ ನೀಡಿರಲಿಲ್ಲ. ಸಾರ್ವಜನಿಕವಾಗಿಯೂ ವರದಿಲಭ್ಯವಾಗಿಲ್ಲ. ಇದೇ ಹಿನ್ನೆಲೆಯಲ್ಲಿ ಇಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಹಿಳೆ, ಪ್ರಕರಣದ ವಿಚಾರಣೆಯ ವರದಿ ಪಡೆಯಲು ನಾನು ಅರ್ಹಳು ಎಂದು ಪ್ರತಿಪಾದಿಸಿದ್ದಾರೆ.</p>.<p>‘ದೂರುದಾರಳ ಪ್ರಕರಣದ ವರದಿಯನ್ನು ಆಕೆಗೇ ನೀಡದೇ ಇರುವುದು ಮತ್ತು ಅದನ್ನು ಬಹಿರಂಗವಾಗಲು ಬಿಡದೇ ಇರುವುದು ಅನ್ಯಾಯ. ಇದು ನ್ಯಾಯಾಂಗದ ದುರಂತ,’ ಎಂದು ಅವರು ಹೇಳಿದ್ದಾರೆ.</p>.<p>ರಂಜನ್ ಗೊಗೊಯಿ ಅವರ ವಿರುದ್ಧ ಸುಪ್ರೀಂ ಕೋರ್ಟ್ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ನ ಮೂವರು ನ್ಯಾಯಮೂರ್ತಿಗಳ ಆಂತರಿಕ ಸಮಿತಿ ರಚಿಸಲಾಗಿತ್ತು. ತನಿಖೆ ನಡೆಸಿರುವ ಸಮಿತಿಯು ಗೊಗೊಯಿ ಅವರಿಗೆ ಪ್ರಕರಣದಲ್ಲಿ ಸೋಮವಾರ ಕ್ಲೀನ್ ಚಿಟ್ ನೀಡಿದೆ.</p>.<p>ಸಿಜೆಐಗೆ ಕ್ಲೀನ್ ಚಿಟ್ ನೀಡಿದಆಂತರಿಕ ಸಮಿತಿಯ ನಿರ್ಧಾರದ ವಿರುದ್ಧ ಮಂಗಳವಾರ ಸುಪ್ರೀಂ ಕೋರ್ಟ್ ಬಳಿಯೇ ಪ್ರತಿಭಟನೆಗಳು ನಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೆಹಲಿ: </strong>ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿಸುಪ್ರಿಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ನ್ಯಾಯಾಲಯದ ಆಂತರಿಕ ಸಮಿತಿಯು ಕ್ಲೀನ್ ಚಿಟ್ ನೀಡಿರುವುದರಿಂದಆಕ್ರೋಶಗೊಂಡಿರುವ ದೂರುದಾರ ಮಹಿಳೆ, ಸಮಿತಿಯತನಿಖಾ ವರದಿಯ ಪ್ರತಿಯನ್ನು ತಮಗೂ ನೀಡಬೇಕು ಎಂದುಆಗ್ರಹಿಸಿದ್ದಾರೆ. ಅಲ್ಲದೆ, ತನಿಖಾ ವರದಿಯನ್ನು ನೀಡದೇ ಇರುವುದು ನ್ಯಾಯಾಂಗದ ದುರಂತ ಎಂದು ಅವರು ಹೇಳಿದ್ದಾರೆ.</p>.<p>ವಿಚಾರಣೆಯನ್ನು ಮಹಿಳೆ ಬಹಿಷ್ಕರಿಸಿರುವುದಾಗಿ ಹೇಳಿದ್ದರೂ, ವಿಚಾರಣೆ ಮುಂದುವರಿಸಿದ್ದನ್ಯಾಯಾಲಯದ ಆಂತರಿಕ ಸಮಿತಿಯು ಸೋಮವಾರ ಸಿಜೆಐ ಗೊಗೊಯಿ ಅವರಿಗೆಕ್ಲೀನ್ ಚಿಟ್ ನೀಡಿತ್ತು. ಪ್ರಕರಣದಲ್ಲಿ ಹುರುಳಿಲ್ಲ ಎಂದಿತ್ತು. ಎಲ್ಲಕ್ಕೂ ಮುಖ್ಯವಾಗಿತನಿಖೆಯವರದಿಯ ಪ್ರತಿಯನ್ನುದೂರುದಾರ ಮಹಿಳೆಗೆ ನೀಡಿರಲಿಲ್ಲ. ಸಾರ್ವಜನಿಕವಾಗಿಯೂ ವರದಿಲಭ್ಯವಾಗಿಲ್ಲ. ಇದೇ ಹಿನ್ನೆಲೆಯಲ್ಲಿ ಇಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಹಿಳೆ, ಪ್ರಕರಣದ ವಿಚಾರಣೆಯ ವರದಿ ಪಡೆಯಲು ನಾನು ಅರ್ಹಳು ಎಂದು ಪ್ರತಿಪಾದಿಸಿದ್ದಾರೆ.</p>.<p>‘ದೂರುದಾರಳ ಪ್ರಕರಣದ ವರದಿಯನ್ನು ಆಕೆಗೇ ನೀಡದೇ ಇರುವುದು ಮತ್ತು ಅದನ್ನು ಬಹಿರಂಗವಾಗಲು ಬಿಡದೇ ಇರುವುದು ಅನ್ಯಾಯ. ಇದು ನ್ಯಾಯಾಂಗದ ದುರಂತ,’ ಎಂದು ಅವರು ಹೇಳಿದ್ದಾರೆ.</p>.<p>ರಂಜನ್ ಗೊಗೊಯಿ ಅವರ ವಿರುದ್ಧ ಸುಪ್ರೀಂ ಕೋರ್ಟ್ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ನ ಮೂವರು ನ್ಯಾಯಮೂರ್ತಿಗಳ ಆಂತರಿಕ ಸಮಿತಿ ರಚಿಸಲಾಗಿತ್ತು. ತನಿಖೆ ನಡೆಸಿರುವ ಸಮಿತಿಯು ಗೊಗೊಯಿ ಅವರಿಗೆ ಪ್ರಕರಣದಲ್ಲಿ ಸೋಮವಾರ ಕ್ಲೀನ್ ಚಿಟ್ ನೀಡಿದೆ.</p>.<p>ಸಿಜೆಐಗೆ ಕ್ಲೀನ್ ಚಿಟ್ ನೀಡಿದಆಂತರಿಕ ಸಮಿತಿಯ ನಿರ್ಧಾರದ ವಿರುದ್ಧ ಮಂಗಳವಾರ ಸುಪ್ರೀಂ ಕೋರ್ಟ್ ಬಳಿಯೇ ಪ್ರತಿಭಟನೆಗಳು ನಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>