<p><strong>ಬೆಂಗಳೂರು:</strong> ಉದ್ಯಮಿ ವಿಜಯ್ ಮಲ್ಯ ಒಡೆತನದ ಊಟಿಯಲ್ಲಿರುವ ಬಂಗಲೆ ಖರೀದಿಗೆ ಹವಾಲಾ ಮಾರ್ಗದಲ್ಲಿ ಹಣ ಬರುತ್ತಿರುವ ಸುಳಿವು ಹಿಡಿದು ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಮೂವರನ್ನು ಬಂಧಿಸಿ ₹75 ಲಕ್ಷ ನಗದು ಜಪ್ತಿ ಮಾಡಿದ್ದಾರೆ.</p>.<p>ಹೈದರಾಬಾದ್ನ ಮುಜಾಹಿದ್ದೀನ್, ನಿಸಾರ್, ಬೆಂಗಳೂರಿನ ವಿ.ವಿ.ಪುರ ನಿವಾಸಿ ಚಿರಾಗ್ ಬಂಧಿತರು. ಕುಖ್ಯಾತ ಹವಾಲಾ ಡೀಲರ್ ದಿನೇಶ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಊಟಿಯಲ್ಲಿರುವ ಮಲ್ಯ ಅವರ ಬಂಗಲೆಯು ಐದು ವರ್ಷಗಳಿಂದ ಖಾಸಗಿ ಕಂಪನಿಯೊಂದರ ಸುಪರ್ದಿಯಲ್ಲಿತ್ತು. ಇತ್ತೀಚೆಗೆ ₹7.5 ಕೋಟಿಗೆ ಅದನ್ನು ಖರೀದಿ ಮಾಡಿದ್ದ ಮುಜಾಹಿದ್ದೀನ್, ₹75 ಲಕ್ಷ ಮುಂಗಡ ಕೊಡಲು ಸ್ನೇಹಿತ ನಿಸಾರ್ ಜೊತೆ ಕ್ರೆಟಾ ಕಾರಿನಲ್ಲಿ ( ಟಿ.ಎನ್-43-ಎಚ್-9641) ಸಜ್ಜನ ರಾವ್ ವೃತ್ತಕ್ಕೆ ಬಂದಿದ್ದ.</p>.<p>ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡ ದಾಳಿ ನಡೆಸಿದೆ.</p>.<p>ದಿನೇಶ್ ಈ ಒಪ್ಪಂದದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ಮುಜಾಹೀದ್ನಿಂದ ಹಣ ಪಡೆದುಕೊಂಡು ಬರುವಂತೆ ಆತ ತನ್ನ ಸಹಚರ ಚಿರಾಗ್ನನನ್ನು ಸಜ್ಜನ್ ರಾವ್ ವೃತ್ತಕ್ಕೆ ಕಳುಹಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಉದ್ಯಮಿ ವಿಜಯ್ ಮಲ್ಯ ಒಡೆತನದ ಊಟಿಯಲ್ಲಿರುವ ಬಂಗಲೆ ಖರೀದಿಗೆ ಹವಾಲಾ ಮಾರ್ಗದಲ್ಲಿ ಹಣ ಬರುತ್ತಿರುವ ಸುಳಿವು ಹಿಡಿದು ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಮೂವರನ್ನು ಬಂಧಿಸಿ ₹75 ಲಕ್ಷ ನಗದು ಜಪ್ತಿ ಮಾಡಿದ್ದಾರೆ.</p>.<p>ಹೈದರಾಬಾದ್ನ ಮುಜಾಹಿದ್ದೀನ್, ನಿಸಾರ್, ಬೆಂಗಳೂರಿನ ವಿ.ವಿ.ಪುರ ನಿವಾಸಿ ಚಿರಾಗ್ ಬಂಧಿತರು. ಕುಖ್ಯಾತ ಹವಾಲಾ ಡೀಲರ್ ದಿನೇಶ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಊಟಿಯಲ್ಲಿರುವ ಮಲ್ಯ ಅವರ ಬಂಗಲೆಯು ಐದು ವರ್ಷಗಳಿಂದ ಖಾಸಗಿ ಕಂಪನಿಯೊಂದರ ಸುಪರ್ದಿಯಲ್ಲಿತ್ತು. ಇತ್ತೀಚೆಗೆ ₹7.5 ಕೋಟಿಗೆ ಅದನ್ನು ಖರೀದಿ ಮಾಡಿದ್ದ ಮುಜಾಹಿದ್ದೀನ್, ₹75 ಲಕ್ಷ ಮುಂಗಡ ಕೊಡಲು ಸ್ನೇಹಿತ ನಿಸಾರ್ ಜೊತೆ ಕ್ರೆಟಾ ಕಾರಿನಲ್ಲಿ ( ಟಿ.ಎನ್-43-ಎಚ್-9641) ಸಜ್ಜನ ರಾವ್ ವೃತ್ತಕ್ಕೆ ಬಂದಿದ್ದ.</p>.<p>ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡ ದಾಳಿ ನಡೆಸಿದೆ.</p>.<p>ದಿನೇಶ್ ಈ ಒಪ್ಪಂದದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ. ಮುಜಾಹೀದ್ನಿಂದ ಹಣ ಪಡೆದುಕೊಂಡು ಬರುವಂತೆ ಆತ ತನ್ನ ಸಹಚರ ಚಿರಾಗ್ನನನ್ನು ಸಜ್ಜನ್ ರಾವ್ ವೃತ್ತಕ್ಕೆ ಕಳುಹಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>