ಅಂದು ತಾನು ಪ್ರೀತಿಸುತ್ತಿದ್ದ ಸ್ನೇಹಿತೆ ನೆಲೆಸಿರುವ ಪೇಯಿಂಗ್ ಗೆಸ್ಟ್ (ಪಿ.ಜಿ.) ಮುಂಭಾಗದಲ್ಲಿ (ನಾಗವಾರ ಫ್ಲೈ ಓವರ್ ಕೆಳಗಡೆ) ನಿಂತು ಜ್ಞಾನೇಂದ್ರ ರೆಡ್ಡಿ, ತಾನಿರುವ ಸ್ಥಳಕ್ಕೆ ಬರುವಂತೆ ಆಕೆಗೆ ಮೊಬೈಲ್ ಕರೆ ಮಾಡಿ ಆಹ್ವಾನಿಸಿದ್ದ. ಸ್ನೇಹಿತೆ ಪಿ.ಜಿ.ಯ ಕಿಟಕಿ ಮೂಲಕ ನೋಡುತ್ತಿದ್ದಂತೆ, ಹಿಂಬದಿಯಿಂದ ಬಂದ ಇಬ್ಬರು ದುಷ್ಕರ್ಮಿಗಳು ರೆಡ್ಡಿ ಅವರನ್ನು ಚಾಕು ತೋರಿಸಿ, ಬೆದರಿಸಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.