ಕಾನ್ಸ್ಟೆಬಲ್ಗಳಾದ ಚಂದ್ರಶೇಖರ್ ಹಾಗೂ ಸಿದ್ದನಾಯ್ಕ ಬುಧವಾರ ರಾತ್ರಿ 1 ಗಂಟೆ ಸುಮಾರಿಗೆಅರಕೆರೆ ಮುಖ್ಯರಸ್ತೆಯಲ್ಲಿ ಗಸ್ತುತಿರುಗುತ್ತಿದ್ದರು.ಈವೇಳೆ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಅಮಿರ್ ಹಾಗೂ ವಿನೋದ್, ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ವಾಹನ ತಿರುಗಿಸಿದ್ದರು. ಇದರಿಂದ ಅನುಮಾನಗೊಂಡ ಸಿಬ್ಬಂದಿ, ಅವರಿಬ್ಬರನ್ನೂ ಹಿಂಬಾಲಿಸಿ ನಂಜಪ್ಪಲೇಔಟ್ನಲ್ಲಿಅಡ್ಡಗಟ್ಟಿದರು ಎನ್ನಲಾಗಿದೆ.