<p><strong>ಬೆಂಗಳೂರು:</strong> ಭಾರತೀಯ ಸಾಮಗಾನ ಸಭಾ ಆಯೋಜಿಸಿದ್ದ ‘ಶಾಸ್ತ್ರೀಯ ಸಂಗೀತೋತ್ಸವ’ದ 10ನೇ ಆವೃತ್ತಿಯಲ್ಲಿ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ‘ಸಾಮಗಾನ ಮಾತಂಗ ಪ್ರಶಸ್ತಿ’ ಪ್ರದಾನ ಮಾಡ ಲಾಯಿತು. ಪ್ರಶಸ್ತಿಯು ₹1ಲಕ್ಷ ನಗದನ್ನು ಒಳಗೊಂಡಿದೆ.</p>.<p>‘ಗುರುಗಳಾದ ಪುಟ್ಟರಾಜ ಗವಾಯಿ ಅವರ ಆಶೀರ್ವಾದ ಮತ್ತು ಸಂಗೀತ ಆಸಕ್ತರ ಪ್ರೇಮದಿಂದ ನಮ್ಮಂತವರು ಉಳಿದಿದ್ದಾರೆ. ಪ್ರಚಾರ ಬಯಸಬೇಡ, ಸಂಗೀತ ಸಾಧನೆ ಮಾಡುತ್ತಿರು ಎಂದು ಗುರುಗಳು ಕಿವಿಮಾತು ಹೇಳುತ್ತಿದ್ದರು. ಅವರ ಮಾತಿನಂತೆ ನಡೆದಿದ್ದರಿಂದಲೇ ಕಲಾಸಕ್ತರ ಪ್ರೀತಿ ಸಿಕ್ಕಿದೆ’ ಎಂದುವೆಂಕಟೇಶ್ ಕುಮಾರ್ ಸ್ಮರಿಸಿದರು.</p>.<p>ಸಂತೂರ್ ವಾದಕ ಪಂಡಿತ್ ಭಜನ್ ಸೊಪೊರಿ, ‘ನಮ್ಮ ದೇಶ ಕಲೆ ಮತ್ತು ಸಂಸ್ಕೃತಿಗೆ ಹೆಸರುವಾಸಿ. ಸಂಗೀತಗಾರರನ್ನು ತಡವಾಗಿ ಗುರುತಿಸಲಾಗುತ್ತದೆ. ಇದು ದುಃಖದ ಸಂಗತಿ’ ಎಂದರು.</p>.<p>ಸಾಮಗಾನ ಸಭಾದ ಅಧ್ಯಕ್ಷ ಆರ್.ಆರ್.ರವಿಶಂಕರ್, ‘ವೆಂಕಟೇಶ್ ಕುಮಾರ್ ಭಕ್ತಿ ಸಂಗೀತದಿಂದಲೇ ನಮ್ಮನ್ನು ಧರ್ಮದ ದಾರಿಗೆ ಎಳೆದು ತರುತ್ತಾರೆ. ಅವರಿಗೆ ಯೋಗ ಮತ್ತು ಯೋಗ್ಯತೆ ಇವೆ’ ಎಂದು ಶ್ಲಾಘಿಸಿದರು.</p>.<p>ರಾಜ್ಯ ಸರ್ಕಾರದ ಮುಖ್ಯ ಕಾರ್ಯ ದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ‘ಬೆಂಗಳೂರಿನಲ್ಲಿ ಸಂಗೀತಕ್ಕೆ ಪ್ರೋತ್ಸಾಹ ನೀಡುವವರ ಕೊರತೆ ಇಲ್ಲ. ಕಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ಸಂಸ್ಥೆಗಳು ಮತ್ತು ದಾನಿಗಳು ಇದ್ದಾರೆ. ಈ ಉತ್ಸವದಲ್ಲಿ ಯುವ ಸಂಗೀತಗಾರರಿಗೆ ಅವಕಾಶ ನೀಡುತ್ತಿರುವುದು ಸಂತಸದ ವಿಚಾರ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಭಾರತೀಯ ಸಾಮಗಾನ ಸಭಾ ಆಯೋಜಿಸಿದ್ದ ‘ಶಾಸ್ತ್ರೀಯ ಸಂಗೀತೋತ್ಸವ’ದ 10ನೇ ಆವೃತ್ತಿಯಲ್ಲಿ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ‘ಸಾಮಗಾನ ಮಾತಂಗ ಪ್ರಶಸ್ತಿ’ ಪ್ರದಾನ ಮಾಡ ಲಾಯಿತು. ಪ್ರಶಸ್ತಿಯು ₹1ಲಕ್ಷ ನಗದನ್ನು ಒಳಗೊಂಡಿದೆ.</p>.<p>‘ಗುರುಗಳಾದ ಪುಟ್ಟರಾಜ ಗವಾಯಿ ಅವರ ಆಶೀರ್ವಾದ ಮತ್ತು ಸಂಗೀತ ಆಸಕ್ತರ ಪ್ರೇಮದಿಂದ ನಮ್ಮಂತವರು ಉಳಿದಿದ್ದಾರೆ. ಪ್ರಚಾರ ಬಯಸಬೇಡ, ಸಂಗೀತ ಸಾಧನೆ ಮಾಡುತ್ತಿರು ಎಂದು ಗುರುಗಳು ಕಿವಿಮಾತು ಹೇಳುತ್ತಿದ್ದರು. ಅವರ ಮಾತಿನಂತೆ ನಡೆದಿದ್ದರಿಂದಲೇ ಕಲಾಸಕ್ತರ ಪ್ರೀತಿ ಸಿಕ್ಕಿದೆ’ ಎಂದುವೆಂಕಟೇಶ್ ಕುಮಾರ್ ಸ್ಮರಿಸಿದರು.</p>.<p>ಸಂತೂರ್ ವಾದಕ ಪಂಡಿತ್ ಭಜನ್ ಸೊಪೊರಿ, ‘ನಮ್ಮ ದೇಶ ಕಲೆ ಮತ್ತು ಸಂಸ್ಕೃತಿಗೆ ಹೆಸರುವಾಸಿ. ಸಂಗೀತಗಾರರನ್ನು ತಡವಾಗಿ ಗುರುತಿಸಲಾಗುತ್ತದೆ. ಇದು ದುಃಖದ ಸಂಗತಿ’ ಎಂದರು.</p>.<p>ಸಾಮಗಾನ ಸಭಾದ ಅಧ್ಯಕ್ಷ ಆರ್.ಆರ್.ರವಿಶಂಕರ್, ‘ವೆಂಕಟೇಶ್ ಕುಮಾರ್ ಭಕ್ತಿ ಸಂಗೀತದಿಂದಲೇ ನಮ್ಮನ್ನು ಧರ್ಮದ ದಾರಿಗೆ ಎಳೆದು ತರುತ್ತಾರೆ. ಅವರಿಗೆ ಯೋಗ ಮತ್ತು ಯೋಗ್ಯತೆ ಇವೆ’ ಎಂದು ಶ್ಲಾಘಿಸಿದರು.</p>.<p>ರಾಜ್ಯ ಸರ್ಕಾರದ ಮುಖ್ಯ ಕಾರ್ಯ ದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ‘ಬೆಂಗಳೂರಿನಲ್ಲಿ ಸಂಗೀತಕ್ಕೆ ಪ್ರೋತ್ಸಾಹ ನೀಡುವವರ ಕೊರತೆ ಇಲ್ಲ. ಕಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ಸಂಸ್ಥೆಗಳು ಮತ್ತು ದಾನಿಗಳು ಇದ್ದಾರೆ. ಈ ಉತ್ಸವದಲ್ಲಿ ಯುವ ಸಂಗೀತಗಾರರಿಗೆ ಅವಕಾಶ ನೀಡುತ್ತಿರುವುದು ಸಂತಸದ ವಿಚಾರ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>