ಎರಡು ವಾರದ ಹಿಂದೆ ಮಹಿಳೆಯ ಸಂಬಂಧಿಕರಾದ ಬಾಲಾಜಿ ವಿಜಯರಾಘವನ್, ಅಡಂಬಾಕಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದರು. ‘ಮಹಿಳೆ ಹಾಗೂ ಸುಬ್ಬಯ್ಯ ಒಂದೇ ಅಪಾರ್ಟ್ಮೆಂಟ್ ಸಮುಚ್ಛಯದಲ್ಲಿ ವಾಸಿಸುತ್ತಿದ್ದರು. ನಮಗೆ ಮೀಸಲಾಗಿದ್ದ ಪಾರ್ಕಿಂಗ್ ಜಾಗವನ್ನು ಸುಬ್ಬಯ್ಯ ಕೇಳಿದ್ದರು. ಇದಕ್ಕೆ ಒಪ್ಪಿದ್ದ ನಾವು, ಬಳಕೆಗೆ ಹಣ ನೀಡಬೇಕು ಎಂದು ಕೇಳಿದ್ದೆವು. ಇಷ್ಟಕ್ಕೇ ಸುಬ್ಬಯ್ಯ ಅವರುಮಾತಿನ ಚಕಮಕಿಗೆ ಇಳಿದಿದ್ದು, ನಂತರದಲ್ಲಿ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಮನೆಯ ಮುಂದೆ ಕೋಳಿಯ ಮಾಂಸ, ಬಳಸಿದ ಮುಖಗವಸು ಹಾಗೂ ತ್ಯಾಜ್ಯವನ್ನೂಎಸೆದಿದ್ದಾರೆ. ಮನೆಯ ಮುಂದೆ ಮೂತ್ರವಿಸರ್ಜನೆ ಮಾಡಿರುವುದಕ್ಕೆ ಸಿಸಿಟಿವಿ ಕ್ಯಾಮೆರಾ ಸಾಕ್ಷಿಯೂ ಇದೆ’ ಎಂದು ಬಾಲಾಜಿ ದೂರಿನಲ್ಲಿ ತಿಳಿಸಿದ್ದರು.