<p class="title"><strong>ಜಮ್ಮು: </strong>ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವಂತೆ ಇರುವ ಇಲ್ಲಿನ ಜಮ್ಮು ಮತ್ತು ಪಠಾಣ್ಕೋಟ್ ಭಾಗಕ್ಕೆ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಸೋಮವಾರ ಭೇಟಿ ನೀಡಿಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು.</p>.<p class="title">ರೈಸಿಂಗ್ ಸ್ಟಾರ್ ಕಾಪ್ಸ್ ಕಾರ್ಯಾಚರಣೆಯ ವ್ಯಾಪ್ತಿಗೆ ಒಳಪಡುವ ಕಠುವಾ, ಸಾಂಬಾ, ಜಮ್ಮು ಮತ್ತು ಪಠಾಣ್ಕೋಟ್ ಭಾಗಗಳಿಗೂ ಭೇಟಿ ನೀಡಿ, ಪರಿಶೀಲನೆ ನಡೆಸಿದರು.</p>.<p class="title">ಲೆಫ್ಟಿನಂಟ್ ಜನರಲ್ ಆರ್.ಪಿ.ಸಿಂಗ್, ಸೇನಾ ಪ್ರಮುಖರಾದ ಲೆಫ್ಟಿನಂಟ್ ಜನರಲ್ ಉಪೇಂದ್ರ ದ್ವಿವೇದಿ, ರೈಸಿಂಗ್ ಸ್ಟಾರ್ ಕಾಪ್ಸ್ ನ ಮೇಜರ್ ಜನರಲ್ ವಿ.ಬಿ.ನಾಯರ್, ಟೈಗರ್ ಡಿವಿಜನ್ನ ಏರ್ ಕಮಾಂಡರ್ ಎ.ಎಸ್. ಪಥಾನಿಯಾ ಅವರೂ ನರವಣೆ ಅವರನ್ನು ಬರಮಾಡಿಕೊಂಡರು. ದ್ವಿವೇದಿ ಅವರು ಪರಿಸ್ಥಿತಿಯ ಚಿತ್ರಣವನ್ನು ನೀಡಿದರು.</p>.<p class="title">ಪಾಕಿಸ್ತಾನ ಕಡೆಯಿಂದ ಕದನ ವಿರಾಮ ಉಲ್ಲಂಘನೆ ಮತ್ತು ಭಯೋತ್ಪಾದಕರ ಒಳನುಸುಳುವಿಕೆ ಯತ್ನಗಳನ್ನು ಯಾವುದೇ ಕಾರಣಕ್ಕೆ ಸಹಿಸಬಾರದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಜಮ್ಮು: </strong>ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವಂತೆ ಇರುವ ಇಲ್ಲಿನ ಜಮ್ಮು ಮತ್ತು ಪಠಾಣ್ಕೋಟ್ ಭಾಗಕ್ಕೆ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಸೋಮವಾರ ಭೇಟಿ ನೀಡಿಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು.</p>.<p class="title">ರೈಸಿಂಗ್ ಸ್ಟಾರ್ ಕಾಪ್ಸ್ ಕಾರ್ಯಾಚರಣೆಯ ವ್ಯಾಪ್ತಿಗೆ ಒಳಪಡುವ ಕಠುವಾ, ಸಾಂಬಾ, ಜಮ್ಮು ಮತ್ತು ಪಠಾಣ್ಕೋಟ್ ಭಾಗಗಳಿಗೂ ಭೇಟಿ ನೀಡಿ, ಪರಿಶೀಲನೆ ನಡೆಸಿದರು.</p>.<p class="title">ಲೆಫ್ಟಿನಂಟ್ ಜನರಲ್ ಆರ್.ಪಿ.ಸಿಂಗ್, ಸೇನಾ ಪ್ರಮುಖರಾದ ಲೆಫ್ಟಿನಂಟ್ ಜನರಲ್ ಉಪೇಂದ್ರ ದ್ವಿವೇದಿ, ರೈಸಿಂಗ್ ಸ್ಟಾರ್ ಕಾಪ್ಸ್ ನ ಮೇಜರ್ ಜನರಲ್ ವಿ.ಬಿ.ನಾಯರ್, ಟೈಗರ್ ಡಿವಿಜನ್ನ ಏರ್ ಕಮಾಂಡರ್ ಎ.ಎಸ್. ಪಥಾನಿಯಾ ಅವರೂ ನರವಣೆ ಅವರನ್ನು ಬರಮಾಡಿಕೊಂಡರು. ದ್ವಿವೇದಿ ಅವರು ಪರಿಸ್ಥಿತಿಯ ಚಿತ್ರಣವನ್ನು ನೀಡಿದರು.</p>.<p class="title">ಪಾಕಿಸ್ತಾನ ಕಡೆಯಿಂದ ಕದನ ವಿರಾಮ ಉಲ್ಲಂಘನೆ ಮತ್ತು ಭಯೋತ್ಪಾದಕರ ಒಳನುಸುಳುವಿಕೆ ಯತ್ನಗಳನ್ನು ಯಾವುದೇ ಕಾರಣಕ್ಕೆ ಸಹಿಸಬಾರದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>