ದೇಶದಲ್ಲೇ ಇಂಥ ಯೋಜನೆ ಪ್ರಾರಂಭಿಸಿದ ಹೆಗ್ಗಳಿಕೆ ಛತ್ತೀಸ್ಗಡದ್ದಾಗಿದ್ದು, ಸ್ಥಳೀಯ ಹಬ್ಬವಾದ ಹರೇಲಿ ಸಂದರ್ಭದಲ್ಲಿ ಇದನ್ನು ಪ್ರಾರಂಭಿಸಲಾಗಿದೆ. ಈ ಮೂಲಕ ದನ ಸಾಕಣೆ, ದನಗಳ ರಕ್ಷಣೆ ಹಾಗೂ ಗ್ರಾಮೀಣ ಆರ್ಥಿಕತೆ ವೃದ್ಧಿಗೆ ಸರ್ಕಾರ ಮುಂದಾಗಿದೆ. ‘ಈ ಯೋಜನೆ ರೈತರಿಗೆ ಹಾಗೂ ದನ ಸಾಕಣೆಗಾರರಿಗೆ ವರವಾಗಲಿದ್ದು, ಕೊರೊನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗ್ರಾಮೀಣ ಭಾಗಕ್ಕೆ ನೆರವಾಗಲಿದೆ’ ಎಂದು ಬಘೇಲ್ ಹೇಳಿದರು.