<p><strong>ರಾಯಪುರ:</strong> ಸಾವಯವ ಗೊಬ್ಬರ ತಯಾರಿಸಲು ಪ್ರತಿ ಕೆ.ಜಿಗೆ ₹2ರಂತೆ ಸೆಗಣಿ ಖರೀದಿಸುವ ‘ಗೋಧನ್ ನ್ಯಾಯ’ ಯೋಜನೆಗೆ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಸೋಮವಾರ ಚಾಲನೆ ನೀಡಿದರು.</p>.<p>ದೇಶದಲ್ಲೇ ಇಂಥ ಯೋಜನೆ ಪ್ರಾರಂಭಿಸಿದ ಹೆಗ್ಗಳಿಕೆ ಛತ್ತೀಸ್ಗಡದ್ದಾಗಿದ್ದು, ಸ್ಥಳೀಯ ಹಬ್ಬವಾದ ಹರೇಲಿ ಸಂದರ್ಭದಲ್ಲಿ ಇದನ್ನು ಪ್ರಾರಂಭಿಸಲಾಗಿದೆ. ಈ ಮೂಲಕ ದನ ಸಾಕಣೆ, ದನಗಳ ರಕ್ಷಣೆ ಹಾಗೂ ಗ್ರಾಮೀಣ ಆರ್ಥಿಕತೆ ವೃದ್ಧಿಗೆ ಸರ್ಕಾರ ಮುಂದಾಗಿದೆ. ‘ಈ ಯೋಜನೆ ರೈತರಿಗೆ ಹಾಗೂ ದನ ಸಾಕಣೆಗಾರರಿಗೆ ವರವಾಗಲಿದ್ದು, ಕೊರೊನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗ್ರಾಮೀಣ ಭಾಗಕ್ಕೆ ನೆರವಾಗಲಿದೆ’ ಎಂದು ಬಘೇಲ್ ಹೇಳಿದರು.</p>.<p>‘ಈ ಯೋಜನೆಯಿಂದ ರೈತರಿಗೆ ಹೆಚ್ಚುವರಿಸಂಪಾದನೆಯಾಗಲಿದ್ದು, ಸಾವಯವ ಗೊಬ್ಬರ ಬಳಕೆಗೂ ಪ್ರೋತ್ಸಾಹ ಸಿಗಲಿದೆ. ಮಹಿಳಾ ಸ್ವಾವಲಂಬಿ ಸಂಘಟನೆಗಳು ಇದನ್ನು ಬಳಸಿಕೊಂಡು ಎರೆಹುಳು ಗೊಬ್ಬರ ತಯಾರಿಸಲಿದ್ದಾರೆ. ಇವುಗಳನ್ನು ಪ್ರತಿ ಕೆ.ಜಿಗೆ ₹8ರಂತೆ ರೈತರಿಗೆ ಮಾರಾಟ ಮಾಡಲಾಗುವುದು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಪುರ:</strong> ಸಾವಯವ ಗೊಬ್ಬರ ತಯಾರಿಸಲು ಪ್ರತಿ ಕೆ.ಜಿಗೆ ₹2ರಂತೆ ಸೆಗಣಿ ಖರೀದಿಸುವ ‘ಗೋಧನ್ ನ್ಯಾಯ’ ಯೋಜನೆಗೆ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಸೋಮವಾರ ಚಾಲನೆ ನೀಡಿದರು.</p>.<p>ದೇಶದಲ್ಲೇ ಇಂಥ ಯೋಜನೆ ಪ್ರಾರಂಭಿಸಿದ ಹೆಗ್ಗಳಿಕೆ ಛತ್ತೀಸ್ಗಡದ್ದಾಗಿದ್ದು, ಸ್ಥಳೀಯ ಹಬ್ಬವಾದ ಹರೇಲಿ ಸಂದರ್ಭದಲ್ಲಿ ಇದನ್ನು ಪ್ರಾರಂಭಿಸಲಾಗಿದೆ. ಈ ಮೂಲಕ ದನ ಸಾಕಣೆ, ದನಗಳ ರಕ್ಷಣೆ ಹಾಗೂ ಗ್ರಾಮೀಣ ಆರ್ಥಿಕತೆ ವೃದ್ಧಿಗೆ ಸರ್ಕಾರ ಮುಂದಾಗಿದೆ. ‘ಈ ಯೋಜನೆ ರೈತರಿಗೆ ಹಾಗೂ ದನ ಸಾಕಣೆಗಾರರಿಗೆ ವರವಾಗಲಿದ್ದು, ಕೊರೊನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗ್ರಾಮೀಣ ಭಾಗಕ್ಕೆ ನೆರವಾಗಲಿದೆ’ ಎಂದು ಬಘೇಲ್ ಹೇಳಿದರು.</p>.<p>‘ಈ ಯೋಜನೆಯಿಂದ ರೈತರಿಗೆ ಹೆಚ್ಚುವರಿಸಂಪಾದನೆಯಾಗಲಿದ್ದು, ಸಾವಯವ ಗೊಬ್ಬರ ಬಳಕೆಗೂ ಪ್ರೋತ್ಸಾಹ ಸಿಗಲಿದೆ. ಮಹಿಳಾ ಸ್ವಾವಲಂಬಿ ಸಂಘಟನೆಗಳು ಇದನ್ನು ಬಳಸಿಕೊಂಡು ಎರೆಹುಳು ಗೊಬ್ಬರ ತಯಾರಿಸಲಿದ್ದಾರೆ. ಇವುಗಳನ್ನು ಪ್ರತಿ ಕೆ.ಜಿಗೆ ₹8ರಂತೆ ರೈತರಿಗೆ ಮಾರಾಟ ಮಾಡಲಾಗುವುದು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>