‘ಒಂದು ಪಕ್ಷವು ತನ್ನ ಮತಗಳನ್ನು ಮತ್ತು ಶಾಸಕರನ್ನು ಮಾರಾಟ ಮಾಡುತ್ತಿದ್ದರೆ, ಇನ್ನೊಂದು ಪಕ್ಷವು ಅವುಗಳನ್ನು ಖರೀದಿಸುತ್ತಿದೆ. ನಾವು ಅನೈತಿಕ ರಾಜಕಾರಣಕ್ಕೆ ಸಾಕ್ಷಿಯಾಗಿದ್ದೇವೆ. ಕಾಂಗ್ರೆಸ್ಗೆ ವಯಸ್ಸಾಗಿದೆ. ಈಗ ಅದು ವೆಂಟಿಲೇಟರ್ನಲ್ಲಿದೆ. ಅದು ಏದುಸಿರು ಬಿಡುತ್ತಿದೆ. ಪ್ಲಾಸ್ಮಾ ಚಿಕಿತ್ಸೆಯಾಗಲಿ, ಹೈಡ್ರಾಕ್ಸಿಕ್ಲೋರೋಕ್ವಿನ್ ಆಗಲಿ ಅಥವಾ ರೆಮ್ಡೆಸಿವಿರ್ ಆಗಲಿ ಕಾಂಗ್ರೆಸ್ ಅನ್ನು ಉಳಿಸುವುದಿಲ್ಲ,’ ಎಂದು ಎಎಪಿ ರಾಷ್ಟ್ರೀಯ ವಕ್ತಾರ ರಾಘವ್ ಚಡ್ಡಾ ಅವರು ಕಾಂಗ್ರೆಸ್ ಪರಿಸ್ಥಿತಿಯನ್ನು ಗೇಲಿ ಮಾಡಿದರು.