ಮುಂಬೈ: ಎಲ್ಗಾರ್ ಪರಿಷತ್ ಮತ್ತು ನಕ್ಸಲರ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಬಂಧಿತರಾಗಿರುವ ಕವಿ ವರವರ ರಾವ್ ಕೋವಿಡ್ ಪೀಡಿತರಾಗಿದ್ದು, ನಿರ್ದಿಷ್ಟ ದೂರದ ಅಂತರದಲ್ಲಿ ರಾವ್ ಅವರನ್ನು ನೋಡಲು ಅವರ ಕುಟುಂಬಕ್ಕೆ ಅವಕಾಶ ಕಲ್ಪಿಸಲು ಸಾಧ್ಯವೇ ಎಂದು ಸೋಮವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಕೇಳಿದೆ.