ಮುಜಾಫ್ಫರ್ನಗರ (ಉತ್ತರಪ್ರದೇಶ):ವ್ಯವಹಾರ ಪಾಲುದಾರನ ಕೊಲೆ ಆರೋಪದ ಮೇಲೆ ಪರಾರಿಯಾಗಿದ್ದ ಸ್ಥಳೀಯ ಲೇವಾದೇವಿದಾರನ ಶವಅವನ ಮನೆ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
ಭಾನುವಾರ ಸಂಜೆ ಶಾಂತಿನಗರದಲ್ಲಿಲೇವಾದೇವಿದಾರ ಅನುಜ್ ಚೌಧರಿ ಶವ ಪತ್ತೆಯಾಗಿದೆ. ಇದಕ್ಕೂ ಮುನ್ನ ಜೂ.30 ರಂದು ಅನುಜ್ ಮನೆಯಲ್ಲಿ ಅವನ ವ್ಯವಹಾರ ಪಾಲುದಾರ ಅಮಿತ್ ಕುಮಾರ್ ಮೃತದೇಹ ಸಿಕ್ಕಿತ್ತು. ಈ ಸಂಬಂಧ ಅನುಜ್ ಚೌಧರಿಯ ವಿರುದ್ಧ ಅಮಿತ್ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಈ ಬಳಿಕ ಅನುಜ್ ಕಾಣೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಅಮಿತ್ ಕೊಲೆ ಪ್ರಕರಣ ಸಂಬಂಧ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಜೂ.30 ರಂದು ಅನುಜ್ ಮನೆಯಲ್ಲೇ ಇಬ್ಬರನ್ನೂ ಹತ್ಯೆಗೈದು,ಅನುಜ್ ಶವವನ್ನು ಚರಂಡಿಯಲ್ಲಿ ಎಸೆದಿರುವುದಾಗಿ ಅವರುತಪ್ಪೊಪ್ಪಿಕೊಂಡಿದ್ದಾರೆ. ಆದರೆ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.