‘ಚಡಪಡಿಕೆ, ಅಸಂಗತತೆ ಮುಂತಾದವುಗಳಿಂದ ಮನಸ್ಸಿನ ಮೇಲೆ ಒತ್ತಡ ಉಂಟಾಗಿ ಒಂದು ರೀತಿಯ ಮಾನಸಿಕ ಅಸ್ವಸ್ಥ ಸ್ಥಿತಿ ಉಂಟಾಗುವುದನ್ನು ‘ಡೆಲಿರಿಯಂ’ ಎಂದು ಗುರುತಿಸಲಾಗುತ್ತದೆ. ಇದರಿಂದ ಜ್ವರ ಹಾಗೂ ಇತರ ಕೆಲವು ಅಸ್ವಸ್ಥತೆಗಳೂ ಕಾಣಿಸುತ್ತವೆ. ಇದಕ್ಕೆ ನರರೋಗ ಚಿಕಿತ್ಸೆ ನೀಡಬೇಕಾಗುವುದರಿಂದ ಅವರನ್ನು ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೋವಿಡ್ ಚಿಕಿತ್ಸೆಗೆ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ’ ಎಂದು ವೈದ್ಯರು ಹೇಳಿದ್ದಾರೆ.