ಉತ್ತರ ಪ್ರದೇಶದ ಬಿಕ್ರು ಗ್ರಾಮದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ ನಂತರ ವಿಕಾಸ ದುಬೆ ಮತ್ತು ಇತರರ ಜತೆ ತ್ರಿವೇದಿ ನಾಪತ್ತೆಯಾಗಿದ್ದ. ಮುಂಬೈ ಎಟಿಎಸ್ನ ಜುಹು ಘಟಕಕ್ಕೆ ಈತನ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಥಾಣೆಯ ಕೋಲ್ಶೇಟ್ ಪ್ರದೇಶದಲ್ಲಿ ಕಾರ್ಯಚರಣೆ ಕೈಗೊಳ್ಳಲಾಗಿದೆ. ಎನ್ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ತಂಡವು ತ್ರಿವೇದಿ ಮತ್ತು ಆತನ ಕಾರು ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.