ಕಾನ್ಪುರದಲ್ಲಿ ಪೊಲೀಸ್ ಎನ್ಕೌಂಟರ್ನಿಂದ ಹತನಾದ ರೌಡಿ ವಿಕಾಸ್ ದುಬೆ ಜೀವಕ್ಕೆ ಪೊಲೀಸರಿಂದ ಅಪಾಯವಿದೆ ಎಂಬ ಅರ್ಜಿಯೊಂದು ದುಬೆ ಸಾವಿಗೆ ಕೆಲ ಗಂಟೆಗಳ ಮೊದಲು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿತ್ತು.
ಈ ವಿಚಾರವನ್ನು ನ್ಯಾಯಾಲಯ ಕಲಾಪಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸುವ ಜಾಲತಾಣ 'ಬಾರ್ ಅಂಡ್ ಬೆಂಚ್' ಬಹಿರಂಗಪಡಿಸಿದೆ.
'ಉತ್ತರ ಪ್ರದೇಶ ಪೊಲೀಸರು ವಿಕಾಸ್ ದುಬೆಯನ್ನು ಕೊಲ್ಲಬಹುದು. ದುಬೆಯ ಎಲ್ಲ ಸಹಚರರನ್ನು ಎನ್ಕೌಂಟರ್ಗಳಲ್ಲಿ ಕೊಲ್ಲಲಾಗಿದೆ' ಎಂದು ಅರ್ಜಿ ಉಲ್ಲೇಖಿಸಿತ್ತು.
'ಅರ್ಜಿಯನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳದಿದ್ದರೆ ಏನೂ ಪ್ರಯೋಜನವಾಗುವುದಿಲ್ಲ. ದುಬೆ ಸಹಚರರ ಎನ್ಕೌಂಟರ್ ಬಗ್ಗೆ ಸಿಬಿಐ ನಿಗಾವಣೆಯಲ್ಲಿ ತನಿಖೆ ನಡೆಯಬೇಕಿದೆ' ಎಂದು ಅರ್ಜಿ ಮನವಿ ಮಾಡಿತ್ತು.
Hours before Vikas Dubey was killed in an encounter, a petition in the Supreme Court demanded urgent listing for action into the possible "killing" of Dubey by UP Police since other accused involved were killed in encounter. #vikasDubeyEncounter@Uppolice#SupremeCourtpic.twitter.com/N2AovY72qW