<p class="title"><strong>ಮ್ಯಾಡ್ರಿಡ್:</strong> ಜಾಗತಿಕ ತಾಪಮಾನ ಕುರಿತಂತೆ ನಾಳಿನ ಸವಾಲು ಎದುರಿಸಲು ಸಜ್ಜಾಗಬೇಕು ಎಂಬ ವಿಜ್ಞಾನಿಗಳ ಎಚ್ಚರಿಕೆಗಳ ನಡುವೆಯೂ ಇಲ್ಲಿ ನಡೆಯುತ್ತಿರುವ ‘ಸಿಒಪಿ25’ ಶೃಂಗಸಭೆ ಇನ್ನೂ ಈ ಸಂಬಂಧ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ.</p>.<p class="title">ಚಂಡಮಾರುತ, ಭೀಕರ ಬರಗಾಲ, ದಾಖಲೆಯ ಬಿಸಿಗಾಳಿ ಸೇರಿದಂತೆ ಭೂಮಿಯ ಮೇಲೆ ಹವಾಮಾನ ಸಂಬಂಧಿತ ಅವಘಡಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಇಲ್ಲಿ ಶೃಂಗಸಭೆ ಸಮಾವೇಶಗೊಂಡಿದ್ದು, ಜಗತ್ತಿನ ಗಮನಸೆಳೆದಿದೆ.</p>.<p class="title">ಚರ್ಚೆ, ಸಂವಾದ ಡಿ.2ರಂದು ಆರಂಭವಾಗಿದ್ದು, ಶುಕ್ರವಾರದ (ಡಿ.13) ವೇಳೆಗೆ ಮುಗಿಯಬೇಕಿತ್ತು. ಆದರೆ, ಚರ್ಚೆ ಶನಿವಾರವೂ ಮುಂದುವರಿಯಿತು. ಭವಿಷ್ಯದ ಸವಾಲುಗಳನ್ನು ಎದುರಿಸುವ ರೂಪುರೇಷೆ ಕುರಿತ ತೀರ್ಮಾನ ಇನ್ನಷ್ಟೇ ಹೊರಬೀಳಬೇಕಿದೆ.</p>.<p class="title">ಭೂಮಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಲು ಒಂದೆಡೆ ವಿಜ್ಞಾನಿಗಳು ಪರ್ವತದಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರೆ, ಇನ್ನೊಂದೆಡೆ ಸರ್ಕಾರಗಳಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ಯುವ ಹೋರಾಟಗಾರರು ಬೀದಿಗಿಳಿದಿದ್ದಾರೆ.</p>.<p class="title">ಶೃಂಗಸಭೆಯ ಚರ್ಚೆ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದ ಆತಿಥೇಯ ಚಿಲಿಯ ಸಂಯೋಜನಾಧಿಕಾರಿ ಆಂಡ್ರೀಸ್ ಲ್ಯಾಂಡ್ರೆಚೆ ಅವರು, ‘ವಿಶ್ವದ ದೃಷ್ಟಿ ನಮ್ಮ ಮೇಲಿದೆ. ಅನಿರೀಕ್ಷಿತ ಸವಾಲು ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದು ತಿಳಿಸಬೇಕಿದೆ‘ ಎಂದರು.</p>.<p>ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಶ್ರೀಮಂತ ದೇಶಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಯಾರು, ಎಷ್ಟು ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂಬ ಕುರಿತ ತಿಕ್ಕಾಟವು ಮುನ್ನೆಲೆಗೆ ಬಂದಿದೆ.</p>.<p>ಈ ಮಧ್ಯೆ, ಬಡ ಮತ್ತು ದುರ್ಬಲ ರಾಷ್ಟ್ರಗಳು ಹಾಗೂ ತ್ವರಿತಗತಿಯಲ್ಲಿ ಬೆಳೆಯುತ್ತಿರುವ, ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿರುವ ಪಟ್ಟಿಯಲ್ಲಿ ಕ್ರಮವಾಗಿ ನಂ. 1 ಮತ್ತು ನಂ. 4ನೇ ಸ್ಥಾನದಲ್ಲಿರುವ ಚೀನಾ, ಭಾರತದಂಥ ದೇಶಗಳ ನಡುವೆ ಕಂದಕ ಹೆಚ್ಚುತ್ತಿದೆ.</p>.<p class="title">ಮ್ಯಾಡ್ರಿಡ್ ಶೃಂಗಸಭೆ ಚರ್ಚೆಯ ಉದ್ದೇಶ 2015ರ ಪ್ಯಾರಿಸ್ನಲ್ಲಿ ಕೈಗೊಂಡ ಒಪ್ಪಂದ ಜಾಗತಿಕ ತಾಪಮಾನವನ್ನು ಎರಡು ಡಿಗ್ರಿ ಸೆಲ್ಸಿಯಸ್ನಷ್ಟು ಕುಗ್ಗಿಸಲು ಒತ್ತು ನೀಡಬೇಕು ಎಂಬುದಕ್ಕೆ ಸಂಬಂಧಿಸಿದ ನಿಯಮಾವಳಿ ಕೈಪಿಡಿ ಅಂತಿಮಗೊಳಿಸುವುದೇ ಆಗಿದೆ</p>.<p>ಭೂಮಿಯಲ್ಲಿನ ತಾಪಮಾನ ಕೈಗಾರಿಕಾ ಕ್ರಾಂತಿಯ ನಂತರ 1 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಿದೆ. 2100ರ ವೇಳೆಗೆ ಇನ್ನು ಎರಡು ಅಥವಾ ಮೂರು ಡಿಗ್ರಿ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ.</p>.<p>‘ಎಲ್ಲ ರಾಷ್ಟ್ರಗಳು ಸ್ಷಪ್ಟವಾದ ತೀರ್ಮಾನ, ನಿಲುವು ಪ್ರಕಟಿಸುವವರೆಗೂ ನಾವು ಕದಲುವುದಿಲ್ಲ’ ಎಂದು ಮಾರ್ಷಲ್ ದ್ವೀಪದ ತಾಪಮಾನ ರಾಯಭಾರಿ ಟಿನಾ ಸ್ಟೀಜ್ ಹೇಳಿದರು.</p>.<p>ಈ ನಡುವೆ ಸಣ್ಣ, ದ್ವೀಪ ರಾಷ್ಟ್ರಗಳ ಒಕ್ಕೂಟವು ಹೇಳಿಕೆಯನ್ನು ನೀಡಿದ್ದು, ‘ಅಮೆರಿಕ, ಕೆನಡಾ, ರಷ್ಯಾ, ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳಿಗೆ ಮಹಾತ್ಮಾಕಾಂಕ್ಷೆಯ ಕೊರತೆ ಇದೆ’ ಎಂದು ಆರೋಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಮ್ಯಾಡ್ರಿಡ್:</strong> ಜಾಗತಿಕ ತಾಪಮಾನ ಕುರಿತಂತೆ ನಾಳಿನ ಸವಾಲು ಎದುರಿಸಲು ಸಜ್ಜಾಗಬೇಕು ಎಂಬ ವಿಜ್ಞಾನಿಗಳ ಎಚ್ಚರಿಕೆಗಳ ನಡುವೆಯೂ ಇಲ್ಲಿ ನಡೆಯುತ್ತಿರುವ ‘ಸಿಒಪಿ25’ ಶೃಂಗಸಭೆ ಇನ್ನೂ ಈ ಸಂಬಂಧ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ.</p>.<p class="title">ಚಂಡಮಾರುತ, ಭೀಕರ ಬರಗಾಲ, ದಾಖಲೆಯ ಬಿಸಿಗಾಳಿ ಸೇರಿದಂತೆ ಭೂಮಿಯ ಮೇಲೆ ಹವಾಮಾನ ಸಂಬಂಧಿತ ಅವಘಡಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಇಲ್ಲಿ ಶೃಂಗಸಭೆ ಸಮಾವೇಶಗೊಂಡಿದ್ದು, ಜಗತ್ತಿನ ಗಮನಸೆಳೆದಿದೆ.</p>.<p class="title">ಚರ್ಚೆ, ಸಂವಾದ ಡಿ.2ರಂದು ಆರಂಭವಾಗಿದ್ದು, ಶುಕ್ರವಾರದ (ಡಿ.13) ವೇಳೆಗೆ ಮುಗಿಯಬೇಕಿತ್ತು. ಆದರೆ, ಚರ್ಚೆ ಶನಿವಾರವೂ ಮುಂದುವರಿಯಿತು. ಭವಿಷ್ಯದ ಸವಾಲುಗಳನ್ನು ಎದುರಿಸುವ ರೂಪುರೇಷೆ ಕುರಿತ ತೀರ್ಮಾನ ಇನ್ನಷ್ಟೇ ಹೊರಬೀಳಬೇಕಿದೆ.</p>.<p class="title">ಭೂಮಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಲು ಒಂದೆಡೆ ವಿಜ್ಞಾನಿಗಳು ಪರ್ವತದಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರೆ, ಇನ್ನೊಂದೆಡೆ ಸರ್ಕಾರಗಳಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ಯುವ ಹೋರಾಟಗಾರರು ಬೀದಿಗಿಳಿದಿದ್ದಾರೆ.</p>.<p class="title">ಶೃಂಗಸಭೆಯ ಚರ್ಚೆ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದ ಆತಿಥೇಯ ಚಿಲಿಯ ಸಂಯೋಜನಾಧಿಕಾರಿ ಆಂಡ್ರೀಸ್ ಲ್ಯಾಂಡ್ರೆಚೆ ಅವರು, ‘ವಿಶ್ವದ ದೃಷ್ಟಿ ನಮ್ಮ ಮೇಲಿದೆ. ಅನಿರೀಕ್ಷಿತ ಸವಾಲು ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದು ತಿಳಿಸಬೇಕಿದೆ‘ ಎಂದರು.</p>.<p>ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಶ್ರೀಮಂತ ದೇಶಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಯಾರು, ಎಷ್ಟು ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂಬ ಕುರಿತ ತಿಕ್ಕಾಟವು ಮುನ್ನೆಲೆಗೆ ಬಂದಿದೆ.</p>.<p>ಈ ಮಧ್ಯೆ, ಬಡ ಮತ್ತು ದುರ್ಬಲ ರಾಷ್ಟ್ರಗಳು ಹಾಗೂ ತ್ವರಿತಗತಿಯಲ್ಲಿ ಬೆಳೆಯುತ್ತಿರುವ, ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿರುವ ಪಟ್ಟಿಯಲ್ಲಿ ಕ್ರಮವಾಗಿ ನಂ. 1 ಮತ್ತು ನಂ. 4ನೇ ಸ್ಥಾನದಲ್ಲಿರುವ ಚೀನಾ, ಭಾರತದಂಥ ದೇಶಗಳ ನಡುವೆ ಕಂದಕ ಹೆಚ್ಚುತ್ತಿದೆ.</p>.<p class="title">ಮ್ಯಾಡ್ರಿಡ್ ಶೃಂಗಸಭೆ ಚರ್ಚೆಯ ಉದ್ದೇಶ 2015ರ ಪ್ಯಾರಿಸ್ನಲ್ಲಿ ಕೈಗೊಂಡ ಒಪ್ಪಂದ ಜಾಗತಿಕ ತಾಪಮಾನವನ್ನು ಎರಡು ಡಿಗ್ರಿ ಸೆಲ್ಸಿಯಸ್ನಷ್ಟು ಕುಗ್ಗಿಸಲು ಒತ್ತು ನೀಡಬೇಕು ಎಂಬುದಕ್ಕೆ ಸಂಬಂಧಿಸಿದ ನಿಯಮಾವಳಿ ಕೈಪಿಡಿ ಅಂತಿಮಗೊಳಿಸುವುದೇ ಆಗಿದೆ</p>.<p>ಭೂಮಿಯಲ್ಲಿನ ತಾಪಮಾನ ಕೈಗಾರಿಕಾ ಕ್ರಾಂತಿಯ ನಂತರ 1 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಿದೆ. 2100ರ ವೇಳೆಗೆ ಇನ್ನು ಎರಡು ಅಥವಾ ಮೂರು ಡಿಗ್ರಿ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ.</p>.<p>‘ಎಲ್ಲ ರಾಷ್ಟ್ರಗಳು ಸ್ಷಪ್ಟವಾದ ತೀರ್ಮಾನ, ನಿಲುವು ಪ್ರಕಟಿಸುವವರೆಗೂ ನಾವು ಕದಲುವುದಿಲ್ಲ’ ಎಂದು ಮಾರ್ಷಲ್ ದ್ವೀಪದ ತಾಪಮಾನ ರಾಯಭಾರಿ ಟಿನಾ ಸ್ಟೀಜ್ ಹೇಳಿದರು.</p>.<p>ಈ ನಡುವೆ ಸಣ್ಣ, ದ್ವೀಪ ರಾಷ್ಟ್ರಗಳ ಒಕ್ಕೂಟವು ಹೇಳಿಕೆಯನ್ನು ನೀಡಿದ್ದು, ‘ಅಮೆರಿಕ, ಕೆನಡಾ, ರಷ್ಯಾ, ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳಿಗೆ ಮಹಾತ್ಮಾಕಾಂಕ್ಷೆಯ ಕೊರತೆ ಇದೆ’ ಎಂದು ಆರೋಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>