‘ಹೊಸ ಶಿಕ್ಷಣ ನೀತಿಯು ಕಲಿಕೆಯವಿಭಜಕಗಳನ್ನು ದೂರ ಮಾಡಿ, ಹಳ್ಳಿಗಾಡಿನ ಬದುಕು, ಒಕ್ಕಲುತನ, ಕಮ್ಮಾರಿಕೆ,
ಕುಂಬಾರಿಕೆ, ಪಶುಸಂಗೋಪನೆ, ತೋಟಗಾರಿಕೆ ಮೊದಲಾದ ವೃತ್ತಿಗಳಿಂದ ಕೂಡಿರುವ ಗ್ರಾಮೀಣ ಭಾರತವನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲಿದೆ. ಭಾರತದ ಶೇ 70ರಷ್ಟು ಜನ ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಶೇ 60ರಷ್ಟು ಜನ ಕೃಷಿಯನ್ನೇ ಅವಲಂಬಿ
ಸಿದ್ದಾರೆ. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಕೌಶಲಗಳನ್ನು ಅಲಕ್ಷಿಸಿದ ಪರಿಣಾಮ, ದೈಹಿಕ ಶ್ರಮ ಆಧರಿಸಿದ ವಿದ್ಯೆಗಳನ್ನು ನಾವು ಶಿಕ್ಷಣವೆಂದು ಪರಿಗಣಿಸಿಯೇ ಇಲ್ಲ. ಗ್ರಾಮೀಣಭಾರತವನ್ನು ಪಠ್ಯದ ಬಹುಮುಖ್ಯ ಭಾಗ
ವಾಗಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೊಂದಾಣಿಕೆ ತರುವುದು ಹೊಸ ಶಿಕ್ಷಣ ನೀತಿಯ ಆಶಯವಾಗಿದೆ’ ಎಂದರು.