ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚಿತ್ರವನ್ನು ತಿರುಚಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಯುವಮೋರ್ಚಾ ನಾಯಕಿ ಪ್ರಿಯಾಂಕಾ ಶರ್ಮಾ ಅವರ ಜಾಮೀನು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ರಾಜ್ಯದ ನ್ಯಾಯಾಲಯಗಳಲ್ಲಿ ಮುಷ್ಕರ ಇದ್ದ ಕಾರಣಪ್ರಿಯಾಂಕಾ ಅವರಿಗೆ ಸುಪ್ರೀಂ ಕೋರ್ಟ್ ಮೊರೆ ಹೋಗದೆ ಬೇರೆ ದಾರಿಯೇ ಇರಲಿಲ್ಲ ಎಂದು ಅವರ ಪರ ವಕೀಲ ನೀರಜ್ ಕಿಶನ್ ಕೌಲ್ ಹೇಳಿದರು.
ನಟಿ ಪ್ರಿಯಾಂಕಾ ಚೋಪ್ರಾ ಅವರ ಚಿತ್ರಕ್ಕೆ ಮಮತಾ ಅವರ ಮುಖದ ಚಿತ್ರವನ್ನು ಅಂಟಿಸಿ ಅದನ್ನು ಫೇಸ್ಬುಕ್ನಲ್ಲಿ ಪ್ರಿಯಾಂಕಾ ಅವರು ಪ್ರಕಟಿಸಿದ್ದರು. ನ್ಯೂಯಾರ್ಕ್ನ ಕಾರ್ಯಕ್ರಮವೊಂದರಲ್ಲಿ ಚೋಪ್ರಾ ಅವರು ಭಾಗವಹಿಸಿದ್ದ ಚಿತ್ರ ಇದಾಗಿತ್ತು.
ಟಿಎಂಸಿಯ ಮುಖಂಡರೊಬ್ಬರು ನೀಡಿದ ದೂರಿನಂತೆ ಹೌರಾ ಪೊಲೀಸರು ಪ್ರಿಯಾಂಕಾ ಅವರನ್ನು ಬಂಧಿಸಿದ್ದರು.