‘ಮಂದಿರ ನಿರ್ಮಿಸಲು ಇಷ್ಟು ವಿಳಂಬವಾಗಿದ್ದು ಏಕೆ ಎಂದು ಸರ್ಕಾರವನ್ನು ಕೇಳಲು ಬಯಸುತ್ತೇವೆ. ಇದು ಇನ್ನಷ್ಟು ವಿಳಂಬವಾಗಬಾರದು. ಸರ್ಕಾರ ತಕ್ಷಣವೇ ಸುಗ್ರೀವಾಜ್ಞೆ ಅಥವಾ ಕಾನೂನು ಜಾರಿಗೆ ತಂದು ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಇದು ಧರ್ಮಾದೇಶ. 5,000 ವರ್ಷಗಳಿಂದ ಈಚೆಗೆ ಇಂತಹ ಯಾವುದೇ ಧರ್ಮಾದೇಶ ವ್ಯಕ್ತವಾಗಿರಲಿಲ್ಲ. ಇದನ್ನು ಸರ್ಕಾರ ಪಾಲಿಸಬೇಕು. ಅದರಲ್ಲಿ ರಾಜಿಯೇ ಇಲ್ಲ’ ಎಂದು ಸಂತ ಸಮಿತಿ ತನ್ನ ನಿರ್ಣಯದಲ್ಲಿ ಹೇಳಿದೆ.