ಬಿಜೆಪಿಯ ಹಾಲಿ ಶಾಸಕರೂ ಆಗಿರುವ ಲಕ್ಷ್ಮಣ್, ‘ನಾವು ಖಂಡಿತಾ ಅಧಿಕಾರದಲ್ಲಿರಲಿದ್ದೇವೆ. ನಾವು ಅಧಿಕಾರಕ್ಕಾರಕ್ಕೇರಲು ಸಾರ್ವಜನಿಕರು ಮತ ನೀಡದಿದ್ದರೆ, ಕಾಂಗ್ರೆಸ್ ಹಾಗೂ ಎಐಎಂಐಎಂ ಹೊರತುಪಡಿಸಿ ಯಾವುದೇ ಪಕ್ಷದೊಡನೆ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆಸಲಾಗುವುದು. ಫಲಿತಾಂಶ ಪ್ರಕಟಗೊಂಡ ಬಳಿಕ ಹೈಕಮಾಂಡ್ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.