ರಾಷ್ಟ್ರೀಯ ಪೌರತ್ವ ನೋಂದಣಿ ಕಾಯಿದೆ ಕುರಿತು ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಚೌದರಿ, ‘ಭಾರತ ಎಲ್ಲರ ದೇಶ. ಆದರೆ ಬಿಜೆಪಿ ಧರ್ಮಗಳ ನಡುವೆ ಭಯ ಹುಟ್ಟಿಸುತ್ತಿದೆ. ಆ ಮೂಲಕ ಮುಸ್ಲಿಮರನ್ನು ಹೊರಗಟ್ಟುವ ಪ್ರಯತ್ನ ಮಾಡುತ್ತಿದೆ. ಆದರೆ, ಅದು ಅವರಿಂದ ಸಾಧ್ಯವಿಲ್ಲ. ಮೋದಿ ಮತ್ತು ಅಮಿತ್ ಶಾ ಅವರ ಮನೆ ಇರುವುದು ಗುಜರಾತ್ನಲ್ಲಿ. ಆದರೆ, ಅವರೀಗ ದೆಹಲಿಯಲ್ಲಿದ್ದಾರೆ. ಅವರನ್ನು ನಾನು ವಲಸಿಗರುಎಂದು ಕರೆಯಬಹುದೇ?’ ಎಂದು ಹೇಳಿದ್ದರು.