ಫೆಬ್ರುವರಿ 3ರಂದು ಸಿಎಂಯೋಗಿ ಆದಿತ್ಯನಾಥ್ಉತ್ತರ ದಿನಾಜ್ಪುರದ ರಾಯ್ಗಂಜ್ ಮತ್ತು ದಕ್ಷಿಣದಿನಾಜ್ಪುರದ ಬಲೂರ್ಘಾಟ್ನಲ್ಲಿಬಿಜೆಪಿ ರ್ಯಾಲಿಗಳಲ್ಲಿ ಭಾಗಿಯಾಗಬೇಕಿತ್ತು. ಆದರೆ, ಯಾವುದೇ ಪೂರ್ವ ಸೂಚನೆ ನೀಡದೆ ಹೆಲಿಕಾಪ್ಟರ್ ಇಳಿಸಲು ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿತ್ತು. ಟೆಲಿಫೋನ್ ಮೂಲಕ ರಾಯ್ಗಂಜ್ ರ್ಯಾಲಿಯ ಜನರನ್ನು ಉದ್ದೇಶಿ ಮಾತನಾಡಿದ ಯೋಗಿ ಆದಿತ್ಯನಾಥ್, ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೊಂದು ಅವಮಾನಕಾರಿ ನಡೆ ಎಂದು ಆರೋಪಿಸಿದರು.