ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನನಗೆ ತಿಳಿದ ಪ್ರಕಾರ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ ಕಡೆಯಲ್ಲೂ ಸಾವು ಸಂಭವಿಸಿದೆ. ಅಹಂಕಾರ ತೋರಬೇಡಿ ಹಾಗೂ ಚೀನಾದ ಸಂಯಮವನ್ನು ದೌರ್ಬಲ್ಯವೆಂದು ಭಾವಿಸಬೇಡಿ ಎಂದು ಭಾರತಕ್ಕೆ ಹೇಳಲು ಬಯಸುತ್ತೇನೆ. ಭಾರತದೊಂದಿಗೆ ಘರ್ಷಣೆ ಚೀನಾಕ್ಕೆ ಬೇಕಿಲ್ಲ. ಆದರೆ, ನಾವು ಅದಕ್ಕೆ ಹೆದರುವುದೂ ಇಲ್ಲ’ ಎಂದು ಅವರು ಟ್ವೀಟ್ ಮಾಡಿದ್ದಾರೆ.