ಜಗತ್ತನ್ನು ಆವರಿಸಿರುವ ಮಹಾಮಾರಿ ಕೊರೊನಾ ವೈರಸ್ ಎಂಬ ಮಹಾಮಾರಿ ಭಾರತವನ್ನೂ ಇನ್ನಿಲ್ಲದಂತೆ ಕಾಡುತ್ತಿದೆ. ದಿನೇ ದಿನೆ ಸೋಂಕಿತರ ಸಂಖ್ಯೆ ವೃದ್ಧಿಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ.
ಭಾನುವಾರ ದೇಶದಲ್ಲಿ ಸೋಂಕಿತರ ಸಂಖ್ಯೆ 15 ಸಾವಿರದ ಗಡಿ ದಾಟಿದೆ. ಸದ್ಯ ದೇಶದಲ್ಲಿ15712 ಮಂದಿ ಸೋಂಕಿತರಿದ್ದಾರೆ. ದೇಶದಲ್ಲಿ ಈ ವರೆಗೆ507 ಮಂದಿ ಮೃತಪಟ್ಟಿದ್ದರೆ,2231 ಮಂದಿ ಗುಣಮುಖರಾಗಿದ್ದಾರೆ.
ಎಂದಿನಂತೆ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ ರಾಜ್ಯಗಳು ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿವೆ. ಮಹಾರಾಷ್ಟ್ರವೊಂದರಲ್ಲೇ3651 ಸೋಂಕಿತರಿದ್ದಾರೆ. ಅಲ್ಲಿ 211 ಮಂದಿ ಕೊರೊನಾ ವೈರಸ್ ಮಹಾಮಾರಿಗೆ ಬಲಿಯಾಗಿದ್ದಾರೆ.
Karnataka has done well so far... thanks to you all. Can we keep the momentum for two more weeks? A little more hardship may be worth it! What do you say? pic.twitter.com/TdMhCRRzCH