ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಕರ್ನಾಟಕದಲ್ಲಿ ಸಾವಿನ ಸಂಖ್ಯೆ 4, ದೇಶದಲ್ಲಿ ಸೋಂಕು ಪ್ರಕರಣಗಳು 3000

Last Updated 3 ಏಪ್ರಿಲ್ 2020, 18:54 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ನ 10ನೇ ದಿನವಾದ ಶುಕ್ರವಾರ ಕೋವಿಡ್ ರೋಗ ದೃಢಪಟ್ಟವರ ಸಂಖ್ಯೆಯಲ್ಲಿ ತೀವ್ರಗತಿಯ ಏರಿಕೆಯಾಗಿದೆ. ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲಿಗಿ ಜಮಾತ್ ಮರ್ಕಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವರಿಗೆ ಸೋಂಕು ತಗುಲಿದ್ದು, ದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ3000ಕ್ಕೆತಲುಪಿದೆ.ಮುಂಬೈಯ ಧಾರಾವಿಯಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಹೆಚ್ಚಿನ ಆತಂಕ ಸೃಷ್ಟಿಸಿದೆ, ಚತ್ತೀಸ್‌ಗಡ, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ ಒಂದು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 83ಕ್ಕೇರಿದೆ.

ಕರ್ನಾಟಕದಲ್ಲಿ ನಾಲ್ಕನೇ ಸಾವು ಪ್ರಕರಣ
ಕೋವಿಡ್ ರೋಗ ಬಾಧಿತ 75ರ ಹರೆಯದ ವ್ಯಕ್ತಿಯೊಬ್ಬರು ಬಾಗಲಕೋಟೆಯಲ್ಲಿ ಸಾವಿಗೀಡಾಗಿದ್ದಾರೆ.

ಇಟಲಿಯಿಂದ 217 ಮಂದಿ ಭಾರತೀಯರನ್ನು ತಾಯ್ನಾಡಿಗೆ ಕರೆತಂದಿದ್ದು ಅವರನ್ನು ಐಟಿಬಿಪಿ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿತ್ತು. ಇವರನ್ನು ಕೊರೊನಾತಪಾಸಣೆಗೊಳಪಡಿಸಿದ್ದು ಯಾರಿಗೂ ಸೋಂಕು ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿಯಲ್ಲಿ 2 ಸಾವು
ದೆಹಲಿಯಲ್ಲಿ ಶುಕ್ರವಾರ ಎರಡು ಸಾವುಸಂಭವಿಸಿದ್ದು, ಸಾವಿನ ಸಂಖ್ಯೆ 6ಕ್ಕೇರಿದೆ.93 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು386 ಪ್ರಕರಣಗಳಿವೆ. ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿದ್ದ 77 ಮಂದಿಗೆ ಸೋಂಕು ಇರುವುದಾಗಿ ಪತ್ತೆಯಾಗಿದ್ದು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ 259ಮಂದಿಗೆ ಸೋಂಕು ಇದೆ. 369 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೆಹಲಿ ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ 67 ಹೊಸ ಪ್ರಕರಣ
ಮಹಾರಾಷ್ಟ್ರದಲ್ಲಿ ಇಂದು 67 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು 490 ಪ್ರಕರಣಗಳು ವರದಿಯಾಗಿವೆ. 6 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 26ಕ್ಕೇರಿದೆ.

ಭೋಪಾಲದ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಕೋವಿಡ್
ಭೋಪಾಲ್ ಆರೋಗ್ಯ ಇಲಾಖೆಯ ನಿರ್ದೇಶಕ ಜೆ.ವಿಜಯ್ ಕುಮಾರ್ ಅವರಿಗೆ ಕೋವಿಡ್ ರೋಗ ಇರುವುದು ದೃಢಪಟ್ಟಿದೆ.

ಒಡಿಶಾದಲ್ಲಿ ಮೂವರಿಗೆ ಕೋವಿಡ್ ರೋಗ ಇರುವುದಾಗಿ ದೃಢಪಟ್ಟಿದೆ. ಒಟ್ಟು 9 ಪ್ರಕರಣಗಳು ಇಲ್ಲಿ ವರದಿಯಾಗಿದ್ದು ಇಬ್ಬರು ಗುಣಮುಖರಾಗಿದ್ದಾರೆ.

ಗುಜರಾತಿನಲ್ಲಿ 67ರ ಹರೆಯದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 9ಕ್ಕೇರಿದೆ.

ಕೇರಳದಲ್ಲಿ ಕೋವಿಡ್ ರೋಗದಿಂದ ಗುಣ ಮುಖರಾದ ಹಿರಿಯ ದಂಪತಿ ಇಂದು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದು ಕೇರಳ ಸರ್ಕಾರ ಹೇಳಿದೆ.ಕೇರಳದಲ್ಲಿ 9 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 295ಕ್ಕೇರಿದೆ.

ಮಹಾರಾಷ್ಟ್ರದ ಮುಂಬೈ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಿದ್ದ 11 ಸಿಐಎಸ್‌ಎಫ್ ಸಿಬ್ಬಂದಿಗೆ ಕೋವಿಡ್ ರೋಗ ತಗುಲಿದೆ.ಕಳೆದ ಕೆಲವು ವಾರಗಳಲ್ಲಿ 142 ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಈ ಪೈಕಿ 4ಮಂದಿಗೆ ರೋಗ ಇರುವುದಾಗಿ ನಿನ್ನೆ ದೃಢಪಟ್ಟಿತ್ತು. ಬಾರಿ ಉಳಿದ 7 ಮಂದಿಗೆ ಇವತ್ತು ರೋಗ ದೃಢಪಟ್ಟಿದೆ.

ತಮಿಳುನಾಡಿನಲ್ಲಿ 102 ಹೊಸ ಪ್ರಕರಣಗಳು ದಾಖಲಾಗಿದ್ದ ಒಟ್ಟು ಪ್ರಕರಣಗಳ ಸಂಖ್ಯೆ 411ಕ್ಕೆ ತಲುಪಿದೆ.

ಕಳೆದ ಎರಡು ದಿನಗಳಲ್ಲಿ ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿದ್ದ 647 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ರಾಜಸ್ಥಾನದಲ್ಲಿ 25 ಮಂದಿಗೆ ಸೋಂಕು ದೃಢಪಟ್ಟಿದ್ದು ಪ್ರಕರಣಗಳ ಸಂಖ್ಯೆ 161ಕ್ಕೇರಿದೆ.

ಹರ್ಯಾಣದಲ್ಲಿ 8 ಪ್ರಕರಣಗಳು ವರದಿಯಾಗಿದ್ದು ಒಟ್ಟು 43 ಪ್ರಕರಣಗಳಿವೆ. ಇದರಲ್ಲಿ 13 ಮಂದಿ ಗುಣಮುಖರಾಗಿದ್ದಾರೆ ಎಂದು ಹರ್ಯಾಣ ಸರ್ಕಾರ ಹೇಳಿದೆ.

ವಿದೇಶದಲ್ಲಿ ಕೋವಿಡ್ -19

ಬ್ರಿಟನ್‌ನಲ್ಲಿಸಾವಿಗೀಡಾದವರ ಸಂಖ್ಯೆ 3,605ಕ್ಕೇರಿದೆ.

ಫಿಲಿಪ್ಪೈನ್ಸ್‌ನಲ್ಲಿ ಒಂದೇ ದಿನ 29 ರೋಗಿಗಳುಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ 136 ಮಂದಿ ಸಾವಿಗೀಡಾಗಿದ್ದು 385 ಹೊಸ ಪ್ರಕರಣಗಳು ವರದಿಯಾಗಿವೆ.

ಫ್ರಾನ್ಸ್‌ನಲ್ಲಿ 588 ಮಂದಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT