ನವದೆಹಲಿ: ಯೋಧ ಸಚಿನ್ ಸಾವಂತ್ ಅವರನ್ನು ಬಂಧಿಸಿರುವ ವಿಷಯಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಮನವಿ ಮಾಡಿ ಸಿಆರ್ಪಿಎಫ್ ಹೆಚ್ಚುವರಿ ಮಹಾ ಪ್ರಧಾನ ನಿರ್ದೇಶಕರು ಕರ್ನಾಟಕ ಡಿಜಿಪಿಗೆ ಪತ್ರ ಬರೆದಿದ್ದಾರೆ.
ಲಾಕ್ಡೌನ್ ಆದೇಶದ ಅನುಷ್ಠಾನ ಕಾರ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಸಿಆರ್ಪಿಎಫ್ ಕೋಬ್ರಾ ಕಮಾಂಡೊ ಸಾವಂತ್ ಅವರನ್ನು ಬೆಳಗಾವಿ ಪೊಲೀಸರು ಏಪ್ರಿಲ್ 23ರಂದು ಬಂಧಿಸಿದ್ದರು.
CRPF Additional Director Gen writes a letter to DGP Karnataka requesting inquiry into the matter wherein Constable Sachin Savant of CoBRA (Commando Battalion for Resolute Action) was arrested&manhandled by Belagavi Police on 23 April on alleged charges of violating lockdown norms
ಇಬ್ಬರು ಕಾನ್ಸ್ಟೆಬಲ್ಗಳು ಹಾಗೂ ಯೋಧನ ನಡುವೆ ಜಟಾಪಟಿ ನಡೆದಿದೆ ಎಂದೂ ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಯೋಧನನ್ನು ಪೊಲೀಸರು ಅನುಚಿತವಾಗಿ ನಡೆಸಿಕೊಂಡಿದ್ದಾರೆ ಎಂಬ ಆರೋಪಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗಿದ್ದವು.