<p><strong>ಬಿಜಾಪುರ (ಛತ್ತೀಸಗಡ) (ಪಿಟಿಐ):</strong> ಇಲ್ಲಿನಕೇಶ್ಕುಟುಲ್ ಬಳಿ ನಕ್ಸಲರೊಂದಿಗೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ರಾಜ್ಯದ ಯೋಧ ಸೇರಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.</p>.<p>ಕಲಬುರ್ಗಿಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದ ಮಹಾದೇವ ಇಂದ್ರಸೇನ್ ಪಾಟೀಲ (55) ಮೃತ ರಾಜ್ಯದ ಯೋಧ. ಇವರು ಎಎಸ್ಐ ಆಗಿದ್ದರು.</p>.<p>ಇವರ ಜತೆಗೆ ಮತ್ತೊಬ್ಬ ಎಎಸ್ಐ ಮದನ್ ಪಾಲ್ ಸಿಂಗ್ (52) ಹಾಗೂಹೆಡ್ ಕಾನ್ಸ್ಟೆಬಲ್ ಸಾಜು ಒ.ಪಿ (47) ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ.</p>.<p class="Subhead">ವಿವರ:ಕೇಶ್ಕುಟುಲ್ ಗ್ರಾಮದ ಸುರಂಗ ಕಾಲುವೆ ಬಳಿ ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಗುಂಡಿನ ಚಕಮಕಿ ನಡೆದಿದೆ. ಸಿಆರ್ಪಿಎಫ್ನ 199ನೇ ಬೆಟಾಲಿಯನ್, ಬೈಕ್ನಲ್ಲಿ ಕಾರ್ಯಾಚರಣೆಗೆ ಹೊರಟಾಗ ನಕ್ಸಲರು ಏಕಾಏಕಿ ಅವರ ಮೇಲೆ ಗುಂಡಿನ ಮಳೆ ಸುರಿಸಿದರು. ಕೂಡಲೇ ಸಿಆರ್ಪಿಎಫ್ನ ಯೋಧರೂ ಪ್ರತಿದಾಳಿ ನಡೆಸಿದರು ಎಂದು ಬಿಜಾಪುರ ಪೊಲೀಸರಿಂದ ಮಾಹಿತಿ ದೊರೆತಿರುವು<br />ದಾಗಿಕಮಲಾಪುರ ಪಿಎಸ್ಐ ಶಿವಶಂಕರ್ ಸಾಹು ತಿಳಿಸಿದ್ದಾರೆ. ಜುಲೈ 1ರಂದು ಮಹಾದೇವ ಅವರ ಪುತ್ರಿಯ ಸೀಮಂತ ನಿಗದಿಯಾಗಿತ್ತು.ಇದರಲ್ಲಿ ಪಾಲ್ಗೊಳ್ಳಲು ಅವರು ಶುಕ್ರವಾರ ಸಂಜೆ ಅಲ್ಲಿಂದ ಹೊರಡುವವರಿದ್ದರು.</p>.<p>ಹುತಾತ್ಮ ಯೋಧನ ಸ್ವಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಜಾಪುರ (ಛತ್ತೀಸಗಡ) (ಪಿಟಿಐ):</strong> ಇಲ್ಲಿನಕೇಶ್ಕುಟುಲ್ ಬಳಿ ನಕ್ಸಲರೊಂದಿಗೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ರಾಜ್ಯದ ಯೋಧ ಸೇರಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.</p>.<p>ಕಲಬುರ್ಗಿಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದ ಮಹಾದೇವ ಇಂದ್ರಸೇನ್ ಪಾಟೀಲ (55) ಮೃತ ರಾಜ್ಯದ ಯೋಧ. ಇವರು ಎಎಸ್ಐ ಆಗಿದ್ದರು.</p>.<p>ಇವರ ಜತೆಗೆ ಮತ್ತೊಬ್ಬ ಎಎಸ್ಐ ಮದನ್ ಪಾಲ್ ಸಿಂಗ್ (52) ಹಾಗೂಹೆಡ್ ಕಾನ್ಸ್ಟೆಬಲ್ ಸಾಜು ಒ.ಪಿ (47) ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ.</p>.<p class="Subhead">ವಿವರ:ಕೇಶ್ಕುಟುಲ್ ಗ್ರಾಮದ ಸುರಂಗ ಕಾಲುವೆ ಬಳಿ ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಗುಂಡಿನ ಚಕಮಕಿ ನಡೆದಿದೆ. ಸಿಆರ್ಪಿಎಫ್ನ 199ನೇ ಬೆಟಾಲಿಯನ್, ಬೈಕ್ನಲ್ಲಿ ಕಾರ್ಯಾಚರಣೆಗೆ ಹೊರಟಾಗ ನಕ್ಸಲರು ಏಕಾಏಕಿ ಅವರ ಮೇಲೆ ಗುಂಡಿನ ಮಳೆ ಸುರಿಸಿದರು. ಕೂಡಲೇ ಸಿಆರ್ಪಿಎಫ್ನ ಯೋಧರೂ ಪ್ರತಿದಾಳಿ ನಡೆಸಿದರು ಎಂದು ಬಿಜಾಪುರ ಪೊಲೀಸರಿಂದ ಮಾಹಿತಿ ದೊರೆತಿರುವು<br />ದಾಗಿಕಮಲಾಪುರ ಪಿಎಸ್ಐ ಶಿವಶಂಕರ್ ಸಾಹು ತಿಳಿಸಿದ್ದಾರೆ. ಜುಲೈ 1ರಂದು ಮಹಾದೇವ ಅವರ ಪುತ್ರಿಯ ಸೀಮಂತ ನಿಗದಿಯಾಗಿತ್ತು.ಇದರಲ್ಲಿ ಪಾಲ್ಗೊಳ್ಳಲು ಅವರು ಶುಕ್ರವಾರ ಸಂಜೆ ಅಲ್ಲಿಂದ ಹೊರಡುವವರಿದ್ದರು.</p>.<p>ಹುತಾತ್ಮ ಯೋಧನ ಸ್ವಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>