ಮೇಲ್ಜಾತಿಗೆ ಸೇರಿದ ಜಮೀನಿನಲ್ಲಿಮಲವಿಸರ್ಜನೆ ಮಾಡಿದ ನಂತರ ಅವನ ಮೇಲೆ ಹಲ್ಲೆ ನಡೆಸಲಾಯಿತು. ಆತ ದಲಿತ ಎಂದು ತಿಳಿದ ಬಳಿಕ ಹಿಂಸಾಚಾರಕ್ಕೆ ತಿರುಗಿದೆ. ತನ್ನನ್ನು ಕಾಪಾಡುವಂತೆ ಸೋದರ ನನಗೆ ಕರೆ ಮಾಡಿದ. ಸ್ಥಳಕ್ಕೆ ಬಂದು ಪೊಲೀಸರ ಸಹಾಯದಿಂದ ಶಕ್ತಿವೇಲ್ನನ್ನು ಕಾಪಾಡಿದೆ. ಆದರೆ ಮನೆಗೆ ತಲುಪುವ ಮುನ್ನವೇ ಪ್ರಜ್ಞೆ ಕಳೆದುಕೊಂಡಿದ್ದ ಶಕ್ತಿವೇಲ್, ವೈದ್ಯರು ಬರುವುದಕ್ಕೂ ಮುನ್ನವೇ ಕೊನೆಯುಸಿರೆಳೆದಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.