ದೀಪಿಕಾ ಪಡುಕೋಣೆ ಪ್ರಧಾನಿ ನರೇಂದ್ರ ಮೋದಿಗಾಗಿ ಪ್ರಚಾರ ಮಾಡುವಾಗ ಆಕೆ ದೇಶಭಕ್ತಳಾಗಿದ್ದಳು ಆದರೆ ಜೆಎನ್ಯುಗೆ ಭೇಟಿ ನೀಡಿದ ಕೂಡಲೇ ದೇಶದ್ರೋಹಿ ಆಗಿ ಬಿಟ್ಟಳು. ಆಕೆ ಜೆಎನ್ಯುಗೆ ಬಂದು ಯಾವುದೇ ಘೋಷಣೆ ಕೂಗಿಲ್ಲ. ಯಾರೊಬ್ಬರ ಹೆಸರನ್ನೂ ಹೇಳಲಿಲ್ಲ. ಆಕೆ ಮೌನವಾಗಿದ್ದಳು. ಗಾಯಗೊಂಡ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಹೋದಳು. ಆದರೆ ಈಗ ಅವರು (ಬಿಜೆಪಿಯವರು) ಹೇಳುತ್ತಿದ್ದಾರೆ ಆಕೆಯ ಸಿನಿಮಾವನ್ನು ನೋಡಲ್ಲ ಎಂದು. ಆಕೆಯ ಯಾವುದೇ ಪಕ್ಷದ ಹೆಸರು ಹೇಳಿಲ್ಲ, ಸಿದ್ಧಾಂತ ಹೇಳಿಲ್ಲ ಅಥವಾ ಘೋಷಣೆ ಕೂಗಿಲ್ಲ. ಹೀಗಿರುವಾಗ ಅವಳ ಸಿನಿಮಾಕ್ಕೆ ಬಹಿಷ್ಕಾರ ಯಾಕೆ? ಅಂದರೆ ಜೆಎನ್ಯುನಲ್ಲಿ ನಡೆದ ದಾಂದಲೆಯಲ್ಲಿ ಸರ್ಕಾರದ ಬೆಂಬಲಿಗರು ಭಾಗಿಯಾಗಿದ್ದಾರೆ ಎಂಬುದು ಅರ್ಥ ಅಲ್ಲವೇ ಎಂದಿದ್ದಾರೆ ಕನ್ಹಯ್ಯ.