ನವದೆಹಲಿ:ತಮ್ಮನ್ನು ಭಯೋತ್ಪಾದಕ ಎಂದು ಹೇಳಿದ ಪಶ್ಚಿಮ ದೆಹಲಿಯಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿದದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್,ನಾನು ಯಾರು ಎಂಬುದನ್ನುದೆಹಲಿಯ ಜನರು ನಿರ್ಧರಿಸಲಿ ಎಂದಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಕೇಜ್ರಿವಾಲ್, ಕಳೆದ ಐದು ವರ್ಷಗಳಿಂದ ನಾನು ದೆಹಲಿಯಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದೇನೆ. ಇವತ್ತು ಬಿಜೆಪಿ ನನ್ನನ್ನು ಭಯೋತ್ಪಾದಕ ಎನ್ನುತ್ತಿದೆ. ಇದು ಖೇದಕರ.
भाजपा वाले कह रहे हैं कि केजरीवाल आतंकवादी है। मैंने 5 साल आपका बेटा बन कर काम किया है। ये निर्णय मैं आप पर छोड़ता हूँ कि मैं आपका बेटा हूँ या आतंकवादी। pic.twitter.com/FzcgOOGmyy
— Arvind Kejriwal (@ArvindKejriwal) January 30, 2020
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ ಭಾವುಕರಾದ ಅವರು,ನನಗೆ ಸಕ್ಕರೆ ಕಾಯಿಲೆ ಇದೆ. ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ. ಸಕ್ಕರೆ ಕಾಯಿಲೆಯಿರುವ ವ್ಯಕ್ತಿ ಮೂರು ನಾಲ್ಕು ಗಂಟೆಗಳಿಗೊಮ್ಮೆ ಆಹಾರ ಸೇವಿಸದಿದ್ದರೆ ಆತ ಸಾಯಬಹುದು. ಅಂಥಾ ಪರಿಸ್ಥಿತಿಯಲ್ಲಿ ನಾನು ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದೆ. ಒಮ್ಮೆ 15 ದಿನ ಮತ್ತೊಮ್ಮೆ 10 ದಿನ ಉಪವಾಸ ಕುಳಿತಿದ್ದೆ.
Arvind Kejriwal on BJP MP Parvesh Verma calling him a terrorist: In last 5 years, I've considered every child in Delhi like my own & arranged quality education for them, does that make me a terrorist? I made arrangements for medicine & tests for people, does a terrorist do this? pic.twitter.com/i8uq0dkGaI
— ANI (@ANI) January 30, 2020
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು, ಆರೋಗ್ಯ ವಲಯ ಸುಧಾರಿಸಲು ಮತ್ತು ಹಿರಿಯ ನಾಗರಿಕರು ಉಚಿತವಾಗಿ ತೀರ್ಥಯಾತ್ರೆ ಕೈಗೊಳ್ಳುವುದಕ್ಕಾಗಿ ನಾನು ಕೆಲಸ ಮಾಡಿದ್ದೇನೆ. ಭಯೋತ್ಪಾದಕನೊಬ್ಬ ಈ ರೀತಿ ಮಾಡುತ್ತಾನಾ? ಕಳೆದ ಐದು ವರ್ಷಗಳಲ್ಲಿ ಈ ಜನರು ನನ್ನ ವಿರುದ್ಧ ಎಲ್ಲ ರೀತಿಯ ಅಧಿಕಾರಗಳನ್ನು ಬಳಸಿದರು. ನಾನು ಭಯೋತ್ಪಾದಕ ಹೇಗಾಗುತ್ತೇನೆ? ದೆಹಲಿಯ ಜನರು ನನ್ನನ್ನು ಮಗನಂತೆ ಪರಿಗಣಿಸುತ್ತಾರೋ, ಸಹೋದರ ಅಥವಾ ಭಯೋತ್ಪಾದಕನಾಗಿ ಪರಿಗಣಿಸುತ್ತಾರೋ ಎಂಬುದನ್ನು ದೆಹಲಿಯ ಜನರೇನಿರ್ಧರಿಸಲಿ ಎಂದು ಹೇಳಿದ್ದಾರೆ.
ಪರ್ವೇಶ್ ವರ್ಮಾ ಹೇಳಿದ್ದೇನು?
"Arvind Kejriwal A Terrorist," Says BJP's Parvesh Verma, Repeat Offender https://t.co/GT22P7NeVD via @YouTube
— syed (@syed63938232) January 30, 2020
ದೆಹಲಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಪರ್ವೇಶ್ ವರ್ಮಾ,ಅರವಿಂದ ಕೇಜ್ರಿವಾಲ್ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮದೀಪುರ್ನ ರಸ್ತೆಗಳು ಶಾಹೀನ್ಬಾಗ್ ಆಗುತ್ತವೆ. ಕೇಜ್ರಿವಾಲ್ನಂಥಾ ಹಲವಾರು ಮೋಸಗಾರರು ಮತ್ತು ಭಯೋತ್ಪಾದಕರು ದೆಹಲಿಯಲ್ಲಿ ಅಡಗಿಕೊಂಡಿದ್ದಾರೆ. ಅವರನ್ನು ಇಲ್ಲಿಂದ ಕಿತ್ತೊಗೆಯಬೇಕು. ಕಾಶ್ಮೀರದಲ್ಲಿರುವ ಭಯೋತ್ಪಾದಕರ ವಿರುದ್ಧ ಹೋರಾಡಬೇಕೇ ಅಥವಾ ದೆಹಲಿಯಲ್ಲಿರುವ ಉಗ್ರ ಕೇಜ್ರಿವಾಲ್ ವಿರುದ್ಧ ಹೋರಾಡಬೇಕೆ ಎಂಬ ಬಗ್ಗೆ ಅರ್ಥ ಮಾಡಿಕೊಳ್ಳಲು ನಾನು ವಿಫಲವಾಗಿದ್ದೇನೆ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.