ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಕುರಿತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ 'ಮೊಸಳೆ ಕಣ್ಣೀರು' ಸುರಿಸುತ್ತಿದ್ದಾರೆ, ಪರೋಕ್ಷವಾಗಿ ಅಧಿಕಾರವು ಈಗಲೂ ಬಿಜೆಪಿ ಕೈಯಲ್ಲಿಯೇ ಇದೆ ಎಂದಿದೆ. ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಸಾಬೀತು ಪಡಿಸಲು ಶಿವಸೇನಾಗೆ ಕೇವಲ 24 ಗಂಟೆ ಅವಕಾಶ ನೀಡಿದ್ದರ ವಿರುದ್ಧ ಪಕ್ಷದ ಮುಖವಾಣಿ 'ಸಾಮನಾ' ಪತ್ರಿಕೆ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.'ಕಾಣದ ಶಕ್ತಿಯು ಈ ಆಟವನ್ನು ನಿಯಂತ್ರಿಸುತ್ತಿರುವಂತೆ ತೋರುತ್ತಿದೆ ಹಾಗೂ ನಿರ್ಧಾರಗಳು ಸಹ ಆ ಶಕ್ತಿ ಹೇಳಿದಂತೆಯೇ ತೆಗೆದುಕೊಳ್ಳಲಾಗುತ್ತಿದೆ' ಎಂದು ಪ್ರಕಟಿಸಿದೆ.