<p><strong>ನವದೆಹಲಿ:</strong>ಕಾಂಗ್ರೆಸ್ ಜೊತೆಗಿನ 18 ವರ್ಷಗಳ ಸಂಬಂಧವನ್ನು ಕಡಿದುಕೊಂಡು, ಕಳೆದ ಮಾರ್ಚ್ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಶನಿವಾರ ಟ್ವಿಟರ್ನಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದರು.</p>.<p>ತಮ್ಮ ಟ್ವಿಟ್ಟರ್ ಖಾತೆಯ ಪ್ರೊಫೈಲ್ನಿಂದ "ಬಿಜೆಪಿ" ಎಂಬ ಅಂಶವನ್ನೇ ಅವರು ತೆಗೆದುಹಾಕಿದ್ದಾರೆ ಎಂಬ ಸುದ್ದಿ ಭಾರಿ ಸದ್ದಾಗಿತ್ತು. ಇದೇ ವಿಚಾರ ಟ್ವಿಟರ್ನಲ್ಲಿ ಶನಿವಾರ ದಿನವಿಡೀ ಟ್ರೆಂಡ್ ಕೂಡ ಆಗಿತ್ತು.</p>.<p>ಈ ಸಂಗತಿಯು, ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ವಾದಕ್ಕೆ ಇಂಬು ನೀಡುವಂತಿತ್ತು. ಆದರೆ, ಸಿಂಧಿಯಾ ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್ನಲ್ಲಿ ಬಿಜೆಪಿಯನ್ನು ತೆಗೆದು ಹಾಕಿರುವುದು ಸುಳ್ಳು ಸುದ್ದಿ ಎಂದು ಸ್ವತಃ ಅವರೇ ಖಚಿತಪಡಿಸಿದ್ದಾರೆ.</p>.<p>ಸಿಂಧಿಯಾ ತಮ್ಮ ಟ್ವಿಟ್ಟರ್ ಪ್ರೊಫೈಲ್ನಲ್ಲಿ ಬಿಜೆಪಿಯನ್ನು ಈ ವರೆಗೆ ಉಲ್ಲೇಖಿಸಿಯೇ ಇಲ್ಲ ಎಂದು ಗೊತ್ತಾಗಿವೆ.</p>.<p>ಇನ್ನು ಈ ಕುರಿತು ಇಂದು ಟ್ವೀಟ್ ಮಾಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ‘ದುಃಖದ ವಿಷಯವೆಂದರೆ, ಸುಳ್ಳು ಸುದ್ದಿ ಸತ್ಯಕ್ಕಿಂತ ವೇಗವಾಗಿ ಚಲಿಸುತ್ತದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>ಕಾಂಗ್ರೆಸ್ ಜೊತೆಗಿನ 18 ವರ್ಷಗಳ ಸಂಬಂಧವನ್ನು ಕಡಿದುಕೊಂಡು, ಕಳೆದ ಮಾರ್ಚ್ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಶನಿವಾರ ಟ್ವಿಟರ್ನಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದರು.</p>.<p>ತಮ್ಮ ಟ್ವಿಟ್ಟರ್ ಖಾತೆಯ ಪ್ರೊಫೈಲ್ನಿಂದ "ಬಿಜೆಪಿ" ಎಂಬ ಅಂಶವನ್ನೇ ಅವರು ತೆಗೆದುಹಾಕಿದ್ದಾರೆ ಎಂಬ ಸುದ್ದಿ ಭಾರಿ ಸದ್ದಾಗಿತ್ತು. ಇದೇ ವಿಚಾರ ಟ್ವಿಟರ್ನಲ್ಲಿ ಶನಿವಾರ ದಿನವಿಡೀ ಟ್ರೆಂಡ್ ಕೂಡ ಆಗಿತ್ತು.</p>.<p>ಈ ಸಂಗತಿಯು, ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ವಾದಕ್ಕೆ ಇಂಬು ನೀಡುವಂತಿತ್ತು. ಆದರೆ, ಸಿಂಧಿಯಾ ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್ನಲ್ಲಿ ಬಿಜೆಪಿಯನ್ನು ತೆಗೆದು ಹಾಕಿರುವುದು ಸುಳ್ಳು ಸುದ್ದಿ ಎಂದು ಸ್ವತಃ ಅವರೇ ಖಚಿತಪಡಿಸಿದ್ದಾರೆ.</p>.<p>ಸಿಂಧಿಯಾ ತಮ್ಮ ಟ್ವಿಟ್ಟರ್ ಪ್ರೊಫೈಲ್ನಲ್ಲಿ ಬಿಜೆಪಿಯನ್ನು ಈ ವರೆಗೆ ಉಲ್ಲೇಖಿಸಿಯೇ ಇಲ್ಲ ಎಂದು ಗೊತ್ತಾಗಿವೆ.</p>.<p>ಇನ್ನು ಈ ಕುರಿತು ಇಂದು ಟ್ವೀಟ್ ಮಾಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ‘ದುಃಖದ ವಿಷಯವೆಂದರೆ, ಸುಳ್ಳು ಸುದ್ದಿ ಸತ್ಯಕ್ಕಿಂತ ವೇಗವಾಗಿ ಚಲಿಸುತ್ತದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>