ದೇಶದಾದ್ಯಂತ ಕೊರೊನಾ ಸೋಂಕು ಭೀತಿ ಇರುವುದರಿಂದ ಬೃಹತ್ ಪ್ರಮಾಣದ ಹೂಡಿಕೆದಾರರ ಸಭೆಯನ್ನು ಆಯೋಜಿಸುವುದು ಕಷ್ಟ. ದೇಶವು ಸಹಜಸ್ಥಿತಿಗೆ ಮರಳಿದ ನಂತರ ಹಾಗೂ ಕೈಗಾರಿಕಾ ಚಟುವಟಿಕೆ ಆರಂಭಗೊಂಡ ನಂತರ ಸಭೆಯ ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಎಂ.ಕೆ.ದ್ವಿವೇದಿ ತಿಳಿಸಿದ್ದಾರೆ.