<p><strong>ನವದೆಹಲಿ: </strong>ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರವೊಂದನ್ನು ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಗೂಗಲ್ ಬೆಂಗಳೂರಿನಲ್ಲಿ ಸ್ಥಾಪಿಸಲಿದೆ.</p>.<p>ಭಾರತಕ್ಕೆ ಅಗತ್ಯವಾದ ಸಾಧನಗಳ ಅಭಿವೃದ್ಧಿಗೆ ಸಂಸ್ಥೆಯು ಹೆಚ್ಚಿನ ಗಮನ ನೀಡುತ್ತಿದೆ. ಜತೆಗೆ, ಈ ಸಾಧನಗಳನ್ನು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಗೂಗಲ್ ರಿಸರ್ಚ್ ಇಂಡಿಯಾದ ಕೃತಕ ಬುದ್ಧಿಮತ್ತೆ ವಿಭಾಗವು ಕಂಪ್ಯೂಟರ್ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧನೆಗೆ ಒತ್ತು<br />ನೀಡುತ್ತಿರುವುದನ್ನು ಮುಂದು<br />ವರಿಸಲಿದೆ ಎಂದು ಗೂಗಲ್ ಹೇಳಿದೆ.</p>.<p>ಕೃತಕ ಬುದ್ಧಿಮತ್ತೆ ವಿಜ್ಞಾನಿ ಮನೀಶ್ ಗುಪ್ತಾ ನೇತೃತ್ವದ ತಂಡವು ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಕೆಲಸ ಮಾಡಲಿದೆ. ಜತೆಗೆ, ಆರೋಗ್ಯ ರಕ್ಷಣೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಸಾಧನಗಳ ಸೃಷ್ಟಿಗೆ ದೇಶದ ಸಂಶೋಧನಾ ಸಂಸ್ಥೆಗಳ ಜತೆಗೆ ಸಹ<br />ಭಾಗಿತ್ವವನ್ನೂ ಹೊಂದಲಿದೆ.</p>.<p>‘ನಾವು ಭಾರತದಿಂದ ಸ್ಫೂರ್ತಿಗೊಂಡಿದ್ದೇವೆ. ಜಾಗತಿಕ ಮಟ್ಟದ ಎಂಜಿನಿಯರಿಂಗ್ ಪ್ರತಿಭಾವಂತರು ಇಲ್ಲಿದ್ದಾರೆ. ಬಲವಾದ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮತ್ತು ಉದ್ಯಮ<br />ಶೀಲತಾ ಹುರುಪಿನಿಂದಾಗಿ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತಕ್ಕೆ ಭಾರಿ ಭವಿಷ್ಯ ಇದೆ. ದೊಡ್ಡ ಸವಾಲುಗಳನ್ನು ಮೆಟ್ಟಿನಿಲ್ಲುವುದು ಸಾಧ್ಯವಾಗಲಿದೆ’ ಎಂದು ಗೂಗಲ್ನ ನೆಕ್ಟ್ಸ್ ಬಿಲಿಯನ್ ಯೂಸರ್ಸ್ ಎಂಡ್ ಪೇಮೆಂಟ್ಸ್ನ ಉಪಾಧ್ಯಕ್ಷ ಸೀಸರ್ ಸೇನ್ಗುಪ್ತಾ ಹೇಳಿದ್ದಾರೆ.</p>.<p>ಮೊದಲ ಬಾರಿಯ ಇಂಟರ್ನೆಟ್ ಬಳಕೆದಾರರಿಗೂ ಅನುಕೂಲ ಆಗುವ ರೀತಿಯಲ್ಲಿ ಹೊಸ ಉತ್ಪನ್ನಗಳು ಮತ್ತು ಹೊಸ ಸೌಲಭ್ಯಗಳನ್ನು ಪರಿಚಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.</p>.<p>ಸಣ್ಣ ವರ್ತಕರಿಗಾಗಿ ‘ಗೂಗಲ್ ಪೇ ಫಾರ್ ಬ್ಯುಸಿನೆಸ್’ ಎಂಬ ಆ್ಯಪ್ ಅನ್ನು ಗೂಗಲ್ ಪೇಗೆ ಸೇರಿಸಲಾಗಿದೆ. ಇದು ಉಚಿತ ಆ್ಯಪ್. ಸಣ್ಣ ವರ್ತಕರು ಡಿಜಿಟಲ್ ಪಾವತಿ ಪಡೆದುಕೊಳ್ಳುವುದನ್ನು<br />ಸುಲಭಗೊಳಿಸಲಾಗಿದೆ. ದೃಢೀಕರಣ ಸರಳವಾಗಿದೆ. ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಭಾರಿ ಪ್ರಗತಿ ಆಗಿದ್ದರೂ ಆರು ಕೋಟಿಯಷ್ಟು ಸಣ್ಣ ವರ್ತಕರಿಗೆ ಇದರ ಪ್ರಯೋಜನ ದೊರೆತಿಲ್ಲಎಂದು ಸೇನ್ಗುಪ್ತಾ ಹೇಳಿದ್ದಾರೆ.</p>.<p>‘ತಂತ್ರಜ್ಞಾನದ ಸಾಧನಗಳು ಜನರ ಖಾಸಗಿತನದ ಹಕ್ಕುಗಳನ್ನು ರಕ್ಷಿಸಬೇಕು. ಹಾಗೆಯೇ ಜನರು ಇಂತಹ ಸಾಧನಗಳನ್ನು ದುರ್ಬಳಕೆ ಮಾಡದಂತೆಯೂ ಎಚ್ಚರ ವಹಿಸಬೇಕು’ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.</p>.<p>***</p>.<p>ಭವಿಷ್ಯವು ತಂತ್ರಜ್ಞಾನಕ್ಕಷ್ಟೇ ಸೀಮಿತವಲ್ಲ. ಎಲ್ಲರ ಒಳಗೊಳ್ಳುವಿಕೆ, ಸಶಕ್ತೀಕರಣ ಮತ್ತು ಆರ್ಥಿಕ ಅವಕಾಶಗಳೂ ಅದರಲ್ಲಿ ಒಳಗೊಂಡಿದೆ. ಭಾರತ ನಮಗೆ ಸ್ಫೂರ್ತಿ</p>.<p><strong>- ಸೀಸರ್ ಸೇನ್ಗುಪ್ತಾ, ಗೂಗಲ್ನ ಉಪಾಧ್ಯಕ್ಷ</strong></p>.<p>***</p>.<p><strong>ಗೂಗಲ್ ಉಪಕ್ರಮ</strong></p>.<p>lಇಂಟರ್ನೆಟ್ ಸಾಥಿ ಕಾರ್ಯಕ್ರಮದ ಅಡಿಯಲ್ಲಿ 80 ಸಾವಿರ ಜನರಿಗೆ ತರಬೇತಿ, ಇವರಿಂದ 3 ಕೋಟಿ ಮಹಿಳೆಯರಿಗೆ ತರಬೇತಿ</p>.<p>lಉದ್ಯೋಗ ಹುಡುಕುತ್ತಿರುವವರಿಗಾಗಿ ಗೂಗಲ್ ಪೇನಲ್ಲಿ ಜಾಬ್ಸ್ಸ್ಪಾಟ್ ಎಂಬ ಉಪವ್ಯವಸ್ಥೆ</p>.<p>l24 ಖಾಸಗಿ ಸಂಸ್ಥೆಗಳ ಜತೆಗೆ ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಜತೆಗೂ ಸಹಭಾಗಿತ್ವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರವೊಂದನ್ನು ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಗೂಗಲ್ ಬೆಂಗಳೂರಿನಲ್ಲಿ ಸ್ಥಾಪಿಸಲಿದೆ.</p>.<p>ಭಾರತಕ್ಕೆ ಅಗತ್ಯವಾದ ಸಾಧನಗಳ ಅಭಿವೃದ್ಧಿಗೆ ಸಂಸ್ಥೆಯು ಹೆಚ್ಚಿನ ಗಮನ ನೀಡುತ್ತಿದೆ. ಜತೆಗೆ, ಈ ಸಾಧನಗಳನ್ನು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಗೂಗಲ್ ರಿಸರ್ಚ್ ಇಂಡಿಯಾದ ಕೃತಕ ಬುದ್ಧಿಮತ್ತೆ ವಿಭಾಗವು ಕಂಪ್ಯೂಟರ್ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧನೆಗೆ ಒತ್ತು<br />ನೀಡುತ್ತಿರುವುದನ್ನು ಮುಂದು<br />ವರಿಸಲಿದೆ ಎಂದು ಗೂಗಲ್ ಹೇಳಿದೆ.</p>.<p>ಕೃತಕ ಬುದ್ಧಿಮತ್ತೆ ವಿಜ್ಞಾನಿ ಮನೀಶ್ ಗುಪ್ತಾ ನೇತೃತ್ವದ ತಂಡವು ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಕೆಲಸ ಮಾಡಲಿದೆ. ಜತೆಗೆ, ಆರೋಗ್ಯ ರಕ್ಷಣೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಸಾಧನಗಳ ಸೃಷ್ಟಿಗೆ ದೇಶದ ಸಂಶೋಧನಾ ಸಂಸ್ಥೆಗಳ ಜತೆಗೆ ಸಹ<br />ಭಾಗಿತ್ವವನ್ನೂ ಹೊಂದಲಿದೆ.</p>.<p>‘ನಾವು ಭಾರತದಿಂದ ಸ್ಫೂರ್ತಿಗೊಂಡಿದ್ದೇವೆ. ಜಾಗತಿಕ ಮಟ್ಟದ ಎಂಜಿನಿಯರಿಂಗ್ ಪ್ರತಿಭಾವಂತರು ಇಲ್ಲಿದ್ದಾರೆ. ಬಲವಾದ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮತ್ತು ಉದ್ಯಮ<br />ಶೀಲತಾ ಹುರುಪಿನಿಂದಾಗಿ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತಕ್ಕೆ ಭಾರಿ ಭವಿಷ್ಯ ಇದೆ. ದೊಡ್ಡ ಸವಾಲುಗಳನ್ನು ಮೆಟ್ಟಿನಿಲ್ಲುವುದು ಸಾಧ್ಯವಾಗಲಿದೆ’ ಎಂದು ಗೂಗಲ್ನ ನೆಕ್ಟ್ಸ್ ಬಿಲಿಯನ್ ಯೂಸರ್ಸ್ ಎಂಡ್ ಪೇಮೆಂಟ್ಸ್ನ ಉಪಾಧ್ಯಕ್ಷ ಸೀಸರ್ ಸೇನ್ಗುಪ್ತಾ ಹೇಳಿದ್ದಾರೆ.</p>.<p>ಮೊದಲ ಬಾರಿಯ ಇಂಟರ್ನೆಟ್ ಬಳಕೆದಾರರಿಗೂ ಅನುಕೂಲ ಆಗುವ ರೀತಿಯಲ್ಲಿ ಹೊಸ ಉತ್ಪನ್ನಗಳು ಮತ್ತು ಹೊಸ ಸೌಲಭ್ಯಗಳನ್ನು ಪರಿಚಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.</p>.<p>ಸಣ್ಣ ವರ್ತಕರಿಗಾಗಿ ‘ಗೂಗಲ್ ಪೇ ಫಾರ್ ಬ್ಯುಸಿನೆಸ್’ ಎಂಬ ಆ್ಯಪ್ ಅನ್ನು ಗೂಗಲ್ ಪೇಗೆ ಸೇರಿಸಲಾಗಿದೆ. ಇದು ಉಚಿತ ಆ್ಯಪ್. ಸಣ್ಣ ವರ್ತಕರು ಡಿಜಿಟಲ್ ಪಾವತಿ ಪಡೆದುಕೊಳ್ಳುವುದನ್ನು<br />ಸುಲಭಗೊಳಿಸಲಾಗಿದೆ. ದೃಢೀಕರಣ ಸರಳವಾಗಿದೆ. ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಭಾರಿ ಪ್ರಗತಿ ಆಗಿದ್ದರೂ ಆರು ಕೋಟಿಯಷ್ಟು ಸಣ್ಣ ವರ್ತಕರಿಗೆ ಇದರ ಪ್ರಯೋಜನ ದೊರೆತಿಲ್ಲಎಂದು ಸೇನ್ಗುಪ್ತಾ ಹೇಳಿದ್ದಾರೆ.</p>.<p>‘ತಂತ್ರಜ್ಞಾನದ ಸಾಧನಗಳು ಜನರ ಖಾಸಗಿತನದ ಹಕ್ಕುಗಳನ್ನು ರಕ್ಷಿಸಬೇಕು. ಹಾಗೆಯೇ ಜನರು ಇಂತಹ ಸಾಧನಗಳನ್ನು ದುರ್ಬಳಕೆ ಮಾಡದಂತೆಯೂ ಎಚ್ಚರ ವಹಿಸಬೇಕು’ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.</p>.<p>***</p>.<p>ಭವಿಷ್ಯವು ತಂತ್ರಜ್ಞಾನಕ್ಕಷ್ಟೇ ಸೀಮಿತವಲ್ಲ. ಎಲ್ಲರ ಒಳಗೊಳ್ಳುವಿಕೆ, ಸಶಕ್ತೀಕರಣ ಮತ್ತು ಆರ್ಥಿಕ ಅವಕಾಶಗಳೂ ಅದರಲ್ಲಿ ಒಳಗೊಂಡಿದೆ. ಭಾರತ ನಮಗೆ ಸ್ಫೂರ್ತಿ</p>.<p><strong>- ಸೀಸರ್ ಸೇನ್ಗುಪ್ತಾ, ಗೂಗಲ್ನ ಉಪಾಧ್ಯಕ್ಷ</strong></p>.<p>***</p>.<p><strong>ಗೂಗಲ್ ಉಪಕ್ರಮ</strong></p>.<p>lಇಂಟರ್ನೆಟ್ ಸಾಥಿ ಕಾರ್ಯಕ್ರಮದ ಅಡಿಯಲ್ಲಿ 80 ಸಾವಿರ ಜನರಿಗೆ ತರಬೇತಿ, ಇವರಿಂದ 3 ಕೋಟಿ ಮಹಿಳೆಯರಿಗೆ ತರಬೇತಿ</p>.<p>lಉದ್ಯೋಗ ಹುಡುಕುತ್ತಿರುವವರಿಗಾಗಿ ಗೂಗಲ್ ಪೇನಲ್ಲಿ ಜಾಬ್ಸ್ಸ್ಪಾಟ್ ಎಂಬ ಉಪವ್ಯವಸ್ಥೆ</p>.<p>l24 ಖಾಸಗಿ ಸಂಸ್ಥೆಗಳ ಜತೆಗೆ ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಜತೆಗೂ ಸಹಭಾಗಿತ್ವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>