ನವದೆಹಲಿ: ಪ್ರವಾಹ, ಭೂಕುಸಿತ, ಚಂಡಮಾರುತ, ಬರದಿಂದ ತತ್ತರಿಸಿದ್ದ ಎಂಟು ರಾಜ್ಯಗಳಿಗೆ ನೀಡಬೇಕಿದ್ದ ಹೆಚ್ಚುವರಿ ಪರಿಹಾರವನ್ನು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿದೆ. ಕರ್ನಾಟಕವೂ ಸೇರಿದಂತೆ ಎಂಟು ರಾಜ್ಯಗಳಿಗೆ ₹5,751.27 ಕೋಟಿ ವಿಪ್ಪತ್ತು ಪರಿಹಾರವನ್ನು ಕೇಂದ್ರ ಘೋಷಿಸಿದೆ.
Home Minister Amit Shah has approved Rs 5,751.27 crore of additional central assistance under National Disaster Response Fund to eight states which were affected by floods/ landslides/cyclone/drought during 2019: Home Minister's Office (File photo) pic.twitter.com/7yWanLeIoq
ಈ ಪರಿಹಾರದಲ್ಲಿ ಕರ್ನಾಟಕಕ್ಕೆ ಸಿಕ್ಕಿರುವುದು ಕೇವಲ ₹11.48 ಕೋಟಿಗಳಷ್ಟೇ.
ಗೃಹ ಮಂತ್ರಿ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಇಂದು ಸಭೆ ನಡೆಸಿ ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತು. ಮಹಾರಾಷ್ಟ್ರಕ್ಕೆ ₹1,758.18 ಕೋಟಿ, ರಾಜಸ್ಥಾನಕ್ಕೆ ₹1090.06ಕೋಟಿ ನೀಡಲಾಗಿದ್ದರೆ, ಕರ್ನಾಟಕಕ್ಕೆ ಪಶುಸಂಗೋಪನೆ ವಲಯದ ಅಡಿಯಲ್ಲಿ 2018–19ರ ಆರ್ಥಿಕ ವರ್ಷದ ಬರ ಪರಿಹಾರವಾಗಿ ₹11.48 ಕೋಟಿ ಬಿಡುಗಡೆ ಮಾಡಲಾಗಿದೆ.
ಇದೇ ವೇಳೆ, ಬಿಹಾರಕ್ಕೆ ₹953.17 ಕೋಟಿ, ಕೇರಳಕ್ಕೆ ₹460.77 ಕೋಟಿ, ನಾಗಾಲ್ಯಾಂಡ್ಗೆ ₹177.37 ಕೋಟಿ, ಒಡಿಶಾಕ್ಕೆ ₹179.64 ಕೋಟಿ, ಪಶ್ಚಿಮ ಬಂಗಾಳಕ್ಕೆ ₹1,090.68 ಕೋಟಿ ಹೆಚ್ಚುವರಿ ಪರಿಹಾರ ನೀಡಲಾಗಿದೆ.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಅಡಿಯಲ್ಲಿ ಕೇಂದ್ರ ಸರ್ಕಾರವು ಈ ಪರಿಹಾರ ಘೋಷಣೆ ಮಾಡಿದೆ.