ದೆಹಲಿ: ದೆಹಲಿಯ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನುಮತ್ತು ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅರವಿಂದ ಕೇಜ್ರಿವಾಲ್ ಐ ಲವ್ ಯೂಎಂದಿದ್ದಾರೆ.
ನನ್ನನ್ನು ಮಗನೆಂದು ಪರಿಗಣಿಸಿದದೆಹಲಿ ಜನರ ಗೆಲುವು ಇದು. ಹನುಮಾನ್ ನಮ್ಮನ್ನು ಆಶೀರ್ವದಿಸಿದ್ದಾರೆ. ದೆಹಲಿಯಜನರ ಅಭಿವೃದ್ದಿಗಾಗಿ ದುಡಿಯಲು ದೇವರು ನಮಗೆ ಹೆಚ್ಚಿನ ಶಕ್ತಿ ನೀಡಲು ಎಂದು ಕೇಜ್ರಿವಾಲ್ ಹೇಳಿದ್ದಾರೆ.
अपने बेटे को इतना प्यार देने के लिए दिल्लीवसियों का तहे दिल से शुक्रिया। आज दिल्ली वालों ने एक नई राजनीति को जन्म दिया “काम की राजनीति”। ये भारत माता की जीत है। जय हिंद। pic.twitter.com/q5xP8ytYvc
ದೆಹಲಿ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು ಇಲ್ಲಿಯವರಿಗೆ ಆಮ್ ಆದ್ಮಿ ಪಕ್ಷ 70 ಸೀಟುಗಳ ಪೈಕಿ 63ರಲ್ಲಿ ಮುನ್ನಡೆ ಸಾಧಿಸಿದೆ.
ದೆಹಲಿಯಲ್ಲಿ ರಾಜಕೀಯ ಕೆಲಸ ಜನ್ಮ ತಾಳಿದೆ ಮತ್ತು ಎಎಪಿಯ ಗೆಲುವುದೇಶದ ಗೆಲುವು ಆಗಿದೆ. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಮುನ್ನ ಕೇಜ್ರಿವಾಲ್ 'ಭಾರತ್ ಮಾತಾ ಕೀ ಜೈ' 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆ ಕೂಗಿದ್ದಾರೆ.