ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದಿದ್ದ ಸಂಘರ್ಷದಲ್ಲಿ ಒಬ್ಬ ಸೇನಾಧಿಕಾರಿ ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದರು. ಈ ವಿಚಾರ ದೇಶದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ಚೀನಾ ಪಡೆಗಳ ದಾಳಿಯಲ್ಲಿ ಭಾರತದ ಯೋಧರು ಮಡಿಯಲು ಗುಪ್ತಚರ ವೈಫಲ್ಯ ಕಾರಣ ಎಂಬ ಆರೋಪಗಳೂ ವ್ಯಕ್ತವಾಗಿದ್ದವು. ಚೀನಾದ ದಾಳಿಯು ಪೂರ್ವ ನಿಯೋಜಿತ ಎಂಬುದು ಸ್ಪಷ್ಟ. ಕೇಂದ್ರ ಸರ್ಕಾರ ಗಾಢ ನಿದ್ರೆಯಲ್ಲಿದ್ದ ಕಾರಣ ಯೋಧರು ಬೆಲೆ ತೆರಬೇಕಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದರು.