<p><strong>ನವದೆಹಲಿ:</strong> ಗೂಗಲ್, ಉಬರ್, ಅಮೆಜಾನ್ ಮತ್ತು ಫೇಸ್ಬುಕ್ನಂಥ ದೈತ್ಯ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವ ಭಾರತೀಯ ಮತ್ತು ಭಾರತ ಮೂಲದ ವೃತ್ತಿಪರ ಟೆಕಿಗಳ ಗುಂಪೊಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನೋಂದಣಿ (ಎನ್ಆರ್ಸಿ)ವಿರುದ್ಧ ಬಹಿರಂಗ ಪತ್ರವೊಂದನ್ನು ಬರೆದಿದೆ.</p>.<p>ಸಿಎಎ ಮತ್ತು ಎನ್ಆರ್ಸಿಯನ್ನು ‘ಫ್ಯಾಸಿಸ್ಟ್’ ಎಂದು ಈ ಗುಂಪು ಕರೆದಿದ್ದು,ಬೃಹತ್ ಉದ್ಯಮಗಳ ಮುಖಂಡರಾದ ಸುಂದರ್ ಪಿಚ್ಚೈ, ಸತ್ಯ ನಾದೆಲ್ಲಾ ಮತ್ತು ಮುಖೇಶ್ ಅಂಬಾನಿಯಂಥವರು ‘ಒಂದು ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಭಾರತ ಸರ್ಕಾರದ ಫ್ಯಾಸಿಸ್ಟ್ ಕೃತ್ಯಗಳನ್ನು ಸಾರ್ವಜನಿಕವಾಗಿ ಖಂಡಿಸಬೇಕು’ ಎಂದು ಒತ್ತಾಯಿಸಿದೆ.</p>.<p>‘ನಾವು ಎಂಜಿನಿಯರ್ಗಳು, ಸಂಶೋಧಕರು, ವಿಶ್ಲೇಷಕರು, ವಿನ್ಯಾಸಕಾರರು– ‘ಫ್ಯಾಸಿಸ್ಟ್ ಸರ್ಕಾರವನ್ನು ಮತ್ತು ಅದು ನಾಗರಿಕರ ಮೇಲೆ ಹೇರುವ ಕ್ರೂರತೆಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇವೆ. ಪ್ರತಿಭಟನಕಾರ ಮೇಲೆ ನಡೆಯುತ್ತಿರುವ ಸರ್ಕಾರಿ ಪ್ರಾಯೋಜಿತ ಹಿಂಸಾಚಾರ ತಕ್ಷಣವೇ ನಿಲ್ಲಬೇಕು’ ಎಂದು ಗುಂಪು ಬಹಿರಂಗ ಪತ್ರದಲ್ಲಿ ಒತ್ತಾಯಿಸಿದೆ.</p>.<p>‘ಈ ನೌಕರರು ಸ್ಯಾನ್ಫ್ರಾನ್ಸಿಸ್ಕೊ, ಸಿಯಾಟಲ್, ಲಂಡನ್, ಇಸ್ರೇಲ್ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವವರು ಎಂದು ಹೇಳಿಕೊಂಡಿರುವ ಗುಂಪು, ಇಲ್ಲಿನ ಅಭಿಪ್ರಾಯಗಳು ತಮ್ಮ ವೈಯಕ್ತಿಕ ನಿಲುವುಗಳಾಗಿದ್ದು, ನಮ್ಮ ಉದ್ಯೋಗದಾತರ ನಿಲುವು–ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ’ ಎಂದು ಗುಂಪು ಸ್ಪಷ್ಟಪಡಿಸಿದೆ.</p>.<p><strong>ವಿದ್ಯಾರ್ಥಿಗಳ ಪ್ರತಿಭಟನೆ</strong></p>.<p>ಮುಂಬೈ: ಸಿಎಎ ಮತ್ತು ಎನ್ಆರ್ಸಿ ವಿರೋಧಿಸಿ ಮುಂಬೈನ ಆಜಾದ್ ಮೈದಾನದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಗೂಗಲ್, ಉಬರ್, ಅಮೆಜಾನ್ ಮತ್ತು ಫೇಸ್ಬುಕ್ನಂಥ ದೈತ್ಯ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವ ಭಾರತೀಯ ಮತ್ತು ಭಾರತ ಮೂಲದ ವೃತ್ತಿಪರ ಟೆಕಿಗಳ ಗುಂಪೊಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನೋಂದಣಿ (ಎನ್ಆರ್ಸಿ)ವಿರುದ್ಧ ಬಹಿರಂಗ ಪತ್ರವೊಂದನ್ನು ಬರೆದಿದೆ.</p>.<p>ಸಿಎಎ ಮತ್ತು ಎನ್ಆರ್ಸಿಯನ್ನು ‘ಫ್ಯಾಸಿಸ್ಟ್’ ಎಂದು ಈ ಗುಂಪು ಕರೆದಿದ್ದು,ಬೃಹತ್ ಉದ್ಯಮಗಳ ಮುಖಂಡರಾದ ಸುಂದರ್ ಪಿಚ್ಚೈ, ಸತ್ಯ ನಾದೆಲ್ಲಾ ಮತ್ತು ಮುಖೇಶ್ ಅಂಬಾನಿಯಂಥವರು ‘ಒಂದು ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಭಾರತ ಸರ್ಕಾರದ ಫ್ಯಾಸಿಸ್ಟ್ ಕೃತ್ಯಗಳನ್ನು ಸಾರ್ವಜನಿಕವಾಗಿ ಖಂಡಿಸಬೇಕು’ ಎಂದು ಒತ್ತಾಯಿಸಿದೆ.</p>.<p>‘ನಾವು ಎಂಜಿನಿಯರ್ಗಳು, ಸಂಶೋಧಕರು, ವಿಶ್ಲೇಷಕರು, ವಿನ್ಯಾಸಕಾರರು– ‘ಫ್ಯಾಸಿಸ್ಟ್ ಸರ್ಕಾರವನ್ನು ಮತ್ತು ಅದು ನಾಗರಿಕರ ಮೇಲೆ ಹೇರುವ ಕ್ರೂರತೆಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇವೆ. ಪ್ರತಿಭಟನಕಾರ ಮೇಲೆ ನಡೆಯುತ್ತಿರುವ ಸರ್ಕಾರಿ ಪ್ರಾಯೋಜಿತ ಹಿಂಸಾಚಾರ ತಕ್ಷಣವೇ ನಿಲ್ಲಬೇಕು’ ಎಂದು ಗುಂಪು ಬಹಿರಂಗ ಪತ್ರದಲ್ಲಿ ಒತ್ತಾಯಿಸಿದೆ.</p>.<p>‘ಈ ನೌಕರರು ಸ್ಯಾನ್ಫ್ರಾನ್ಸಿಸ್ಕೊ, ಸಿಯಾಟಲ್, ಲಂಡನ್, ಇಸ್ರೇಲ್ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವವರು ಎಂದು ಹೇಳಿಕೊಂಡಿರುವ ಗುಂಪು, ಇಲ್ಲಿನ ಅಭಿಪ್ರಾಯಗಳು ತಮ್ಮ ವೈಯಕ್ತಿಕ ನಿಲುವುಗಳಾಗಿದ್ದು, ನಮ್ಮ ಉದ್ಯೋಗದಾತರ ನಿಲುವು–ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ’ ಎಂದು ಗುಂಪು ಸ್ಪಷ್ಟಪಡಿಸಿದೆ.</p>.<p><strong>ವಿದ್ಯಾರ್ಥಿಗಳ ಪ್ರತಿಭಟನೆ</strong></p>.<p>ಮುಂಬೈ: ಸಿಎಎ ಮತ್ತು ಎನ್ಆರ್ಸಿ ವಿರೋಧಿಸಿ ಮುಂಬೈನ ಆಜಾದ್ ಮೈದಾನದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>