ಇಂದ್ರಾಣಿ ಕಳೆದ ವರ್ಷ ನ್ಯಾಯಾಧೀಶರ ಎದುರು ತಮ್ಮ ಹೇಳಿಕೆ ದಾಖಲಿಸಿದ್ದರು. ತಾವು ಹಾಗೂ ತಮ್ಮ ಮಾಜಿ ಪತಿ ಪೀಟರ್ ಜೊತೆಗೂಡಿ ನಾರ್ತ್ ಬ್ಲಾಕ್ ಕಚೇರಿಯಲ್ಲಿ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಭೇಟಿಯಾಗಿದ್ದೆವು ಅಂದು ಇಂದ್ರಾಣಿ ಹೇಳಿಕೆ ಕೊಟ್ಟಿದ್ದರು. ಚಿದಂಬರಂ ಅವರು ತಮ್ಮ ಪುತ್ರನ ವ್ಯವಹಾರಕ್ಕೆ ಸಹಕಾರ ನೀಡುವಂತೆ ಕೋರಿದ್ದರು. ಹೀಗಾಗಿ ತಾವು, ಪೀಟರ್ ಹಾಗೂ ಚಿದಂಬರಂ ಅವರ ಪುತ್ರ ಕಾರ್ತಿ ಹಯಾತ್ ಹೋಟೆಲ್ನಲ್ಲಿ ಭೇಟಿಯಾಗಿದ್ದನ್ನು ಇಂದ್ರಾಣಿ ಪ್ರಸ್ತಾಪಿಸಿದ್ದರು. ಇದೇ ಸಭೆಯಲ್ಲೇ ₹7 ಕೋಟಿ (10 ಲಕ್ಷ ಡಾಲರ್) ಹಣಕ್ಕೆ ಬೇಡಿಕೆ ಇಡಲಾಗಿತ್ತು.