ನವದೆಹಲಿ:‘ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆ’ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಚಾಲನೆ ನೀಡಿದರು.
70 ವಿಧಾನಸಭಾ ಕ್ಷೇತ್ರಗಳ 1,100 ಹಿರಿಯ ನಾಗರಿಕರು ಈ ಯೋಜನೆಯ ಅನುಕೂಲ ಪಡೆಯಬಹುದು.
ಈ ಯೋಜನೆ ಅನುಸಾರ 60 ವರ್ಷದವರು ತಮ್ಮ ಪತಿ ಅಥವಾ ಪತ್ನಿಯೊಂದಿಗೆ ಉಚಿತ ಯಾತ್ರೆ ಕೈಗೊಳ್ಳಬಹುದು.
ಅರ್ಜಿದಾರರ ಸಂಗಾತಿ 70 ವರ್ಷ ಮೇಲ್ಪಟ್ಟಿದ್ದರೆ ಅವರೊಂದಿಗೆ 20 ವರ್ಷದವರನ್ನು ಕರೆದುಕೊಂಡು ಹೋಗುವ ಅವಕಾಶವನ್ನು ಒದಗಿಸಲಾಗಿದೆ.
ಎರಡು ಹಗಲು, ಮೂರು ಯಾತ್ರೆ ಕೈಗೊಳ್ಳಬಹುದು.ಕಳೆದ ಜುಲೈ ತಿಂಗಳಲ್ಲಿ ಈ ಯೋಜನೆಗೆ ಆಪ್ ಸರ್ಕಾರ ಅನುಮೋದನೆ ನೀಡಿದೆ. ಸರ್ಕಾರ ಪ್ರತಿ ವರ್ಷ ಈ ಯೋಜನೆಗೆ ₹ 77 ಸಾವಿರ ಭರಿಸಲಿದೆ. ಸರ್ಕಾರಿ ನೌಕರರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
‘ಹಿರಿಯರಿಗೆ ಗೌರವ ನೀಡದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ.