ವಿಚಾರಣೆ ವೇಳೆ ನ್ಯಾಯಪೀಠ, ‘ಸುಮ್ಮನೇ ಕೋರ್ಟ್ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ನೀವು (ಕೆಪಿಎಸ್ಸಿ) ನೆಪಮಾತ್ರಕ್ಕೆ ಈ ಅರ್ಜಿ ಸಲ್ಲಿಸಿದ್ದೀರಿ. ಈ ಪ್ರಕರಣದ ವಿಚಾರಣೆಗೆಂದೇ ವಿಶೇಷ ನ್ಯಾಯಪೀಠ ರಚನೆಯಾಗಿದೆ. ನಿಮಗೆ ಅನುಕೂಲ ಆದೇಶ ದೊರಕಲಿಲ್ಲ ಎಂದಾಕ್ಷಣ ಮಧ್ಯಂತರ ಅರ್ಜಿಗಳನ್ನು ಸಲ್ಲಿಸುತ್ತಾ ವಿಳಂಬದ ದಾರಿ ಹುಡುಕುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿತು. ಕೆಪಿಎಸ್ಸಿಗೆ ಕೋರ್ಟ್ ವೆಚ್ಚ ವಿಧಿಸಿ ಆದೇಶಿಸಿತು. ಆದರೆ, ವೆಚ್ಚದ ಮೊತ್ತವನ್ನು ನಮೂದಿಸಿಲ್ಲ.